ರಾಯಚೂರು, ಸೆ.01: ಮಂತ್ರಾಲಯದ(mantralaya) ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ (Raghavendra Swamy Aradhana Mahotsava) ಚಾಲನೆ ಸಿಕ್ಕಿದ್ದು, ರಾಯರ ಮಠದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ರಾಯರ ಆರಾಧನೆಯ ಸಪ್ತರಾತ್ರೋತ್ಸವ ಅದ್ದೂರಿಯಾಗಿ ನಡೆದಿದೆ. ಇಂದು(ಸೆ.1) ಶ್ರೀಮಠದಲ್ಲಿ ರಾಯರ ಮಧ್ಯರಾಧನೆ ವಿಶೇಷ ಇತ್ತು. ತಿರುಪತಿ ತಿರುಮಲದಿಂದ ಶ್ರೀಮಠಕ್ಕೆ ಶೇಷ ವಸ್ತ್ರ ಬಂದಿದ್ದು, ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷ ವಸ್ತ್ರ ಬರಮಾಡಿಕೊಂಡರು. ಬಳಿಕ ಮೂಲ ಬೃಂದಾವನಕ್ಕೆ ಶೇಷ ವಸ್ತ್ರ ಸಮರ್ಪಣೆ ಮಾಡಿದರು. ಬಳಿಕ ಬಳಿಕ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ರಥೋತ್ಸವಕ್ಕೆ ಚಾಲನೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Fri, 1 September 23