ವಿಜಯಪುರ, ಆ.09: ವಿಜಯಪುರದ ಬಸವನ ನಗರದ ಬಳಿ ನಿನ್ನೆ(ಗುರುವಾರ) ಆ್ಯಕ್ಟಿವಾಕ್ಕೆ(ಸ್ಕೂಟರ್) ಇನ್ನೋವಾ ವಾಹನ ಡಿಕ್ಕಿಯಾಗಿ ಇನ್ನೋವಾದ ಅಡಿಯಲ್ಲೇ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ್ದ. ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಳಿಕ ಬರೋಬ್ಬರಿ ಎರಡುವರೆ ಕಿಲೋಮೀಟರ್, ಬಸವ ನಗರದಿಂದ ಜಿಲ್ಲಾಪಂಚಾಯತಿ ಪ್ರವೇಶ ದ್ವಾರದವರೆಗೂ ಬೈಕ್ ಸವಾರನನ್ನು ಇನ್ನೋವಾ ಕಾರ್ ಚಾಲಕ ಎಳೆದೊಯ್ದಿದ್ದ. ಈ ಹಿನ್ನಲೆ ರವಿ ಮೇಲಿನಮನಿ (37) ಕೊನೆಯುಸಿರೆಳೆದಿದ್ದ. ಇದೀಗ ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಮೃತ ವ್ಯಕ್ತಿ, ಭೀಮಾತೀರದ ಹಂತಕರ ಕುಖ್ಯಾತಿಯ ಬಾಗಪ್ಪ ಹರಿಜನ ಸಂಬಂಧಿಕನಾಗಿದ್ದು, ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ. ಸಧ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Fri, 9 August 24