‘ಎಸ್. ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಮುಖ್ಯಾಂಶಗಳು
- ಮೈಸೂರಿನಲ್ಲಿ ಎಸ್. ಜಾನಕಿ ಅಂತಿಮ ದರ್ಶನ ಪಡೆದ ಸಾಧು ಕೋಕಿಲ.
- ಜಾನಕಿ ಅವರ ಸ್ಮಾರಕ ಮೈಸೂರಿನಲ್ಲೇ ಆಗಬೇಕು: ಒತ್ತಾಯಿಸಿದ ನಟ.
- ತಾಯಿಯನ್ನು ಕಳೆದುಕೊಂಡ ದಿನಗಳನ್ನು ನೆನೆದ ನಟ ಸಾಧು ಕೋಕಿಲ.
ನಟ ಸಾಧು ಕೋಕಿಲ ಮೈಸೂರಿನಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ‘ನಮ್ಮ ತಾಯಿ ಸಿಂಗರ್. ವಾದ್ಯಗೋಷ್ಠಿಗಳಲ್ಲಿ ಅವರು ಕೇವಲ ಜಾನಕಿ ಅವರ ಹಾಡನ್ನು ಮಾತ್ರ ಹಾಡುತ್ತಿದ್ದರು’ ಎಂದು ಆ ದಿನಗಳನ್ನು ಸಾಧು ಕೋಕಿಲ ನೆನಪಿಸಿಕೊಂಡಿದ್ದಾರೆ.
ನಟ ಸಾಧು ಕೋಕಿಲ ಅವರು ಮೈಸೂರಿನಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ನಮ್ಮ ತಾಯಿ ಸಿಂಗರ್. ವಾದ್ಯಗೋಷ್ಠಿಗಳಲ್ಲಿ ಅವರು ಕೇವಲ ಜಾನಕಿ ಅವರ ಹಾಡನ್ನು ಮಾತ್ರ ಹಾಡುತ್ತಿದ್ದರು. ಜಾನಕಿ ಅಮ್ಮನವರ ಧ್ವನಿಯಲ್ಲೇ ನಮ್ಮ ತಾಯಿ ಫೇಮಸ್ ಆಗಿರುವುದು. ನಮ್ಮದು ಆರ್ಕೆಸ್ಟ್ರಾ ಫ್ಯಾಮಿಲಿ. ಜಾನಕಿ ಅಮ್ಮನವರ ಹಾಡುಗಳನ್ನು ಹಾಡಿಯೇ ನಾವು ಜೀವನ ಮಾಡುತ್ತಿದ್ದೆವು. ಎಸ್. ಜಾನಕಿ (S Janaki) ಅವರ ಕರೆದರೂ ಕೇಳದೇ ಹಾಡನ್ನು ಕೇಳುತ್ತಲೇ ನಮ್ಮ ತಾಯಿ ಕೊನೆಯುಸಿರು ಎಳೆದರು. ಜಾನಕಿ ಅವರನ್ನು ಇಷ್ಟಪಡದೇ ಇರುವವರು ಯಾರೂ ಇಲ್ಲ. ಅವರು ಎಲ್ಲ ಪ್ರಕಾರದ ಹಾಡುಗಳನ್ನು ಹಾಡುತ್ತಿದ್ದರು. ಅವರು ಯಾವ ದಿನ ಹಾಡುವುದನ್ನು ನಿಲ್ಲಿಸಿದ್ದರೋ ಅಂದೇ ತಮ್ಮ ಜೀವನ ಇಷ್ಟೇ ಅಂತ ಅಂದುಕೊಂಡಿರುತ್ತಾರೆ. ಇಡೀ ಭಾರತದಲ್ಲಿ ಇಂಥ ಓರ್ವ ಗಾಯಕಿ ಇಲ್ಲ. ಮೈಸೂರಿನಲ್ಲೇ ಜಾನಕಿ ಅವರ ಸ್ಮಾರಕ ಆಗಬೇಕು’ ಎಂದು ಸಾಧು ಕೋಕಿಲ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
