‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್ಗೆ ರಾಗಿಣಿ ಕಿವಿಮಾತು
ನಟಿ ರಾಗಿಣಿ ದ್ವಿವೇದಿ ಅವರು ಸೋನು ನಿಗಮ್ ನೀಡಿದ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ. ರಾಗಿಣಿ ಅವರು ಬೇರೆ ರಾಜ್ಯದವರು. ಅವರು ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಮಾತನಾಡಿದ್ದಾರೆ. ಇಲ್ಲಿಯ ಭಾಷೆಯ ಬಗ್ಗೆ ಸಾಕಷ್ಟು ಗೌರವ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸೋನು ನಿಗಮ್ (Sonu Nigam) ಅವರ ಹೇಳಿಕೆಯನ್ನು ರಾಗಿಣಿ ಖಂಡಿಸಿದ್ದಾರೆ. ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ‘ಪ್ರೀತಿ, ಸಂಸ್ಕೃತಿ ಹಾಗೂ ಪರಸ್ಪರ ಗೌರವಿಸೋದನ್ನು ನಾನು ನಂಬುತ್ತೇನೆ. ಈ ಮೂರು ವಿಚಾರಗಳ ಬಗ್ಗೆ ಯಾರೂ ಮಾತನಾಡಬಾರದು. ಕರ್ನಾಟಕ ನನ್ನ ಮನೆ. ಭಾಷೆ ಎಲ್ಲರನ್ನೂ ಒಂದುಗೂಡಿಸುತ್ತದೆ. ಎಲ್ಲಿಂದ ಬಂದರೂ ಭಾಷೆ ಹಾಗೂ ಸಂಸ್ಕೃತಿ ಗೌರವಿಸಬೇಕು’ ಎಂದಿದ್ದಾರೆ ರಾಗಿಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.