AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಯಂತಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಮನೆಗೆ ವಾಪಸ್ಸು ಬರ್ತೀನಿ ಅಂದಿದ್ರು’; ನಟಿ ತಾರಾ

‘ಜಯಂತಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಮನೆಗೆ ವಾಪಸ್ಸು ಬರ್ತೀನಿ ಅಂದಿದ್ರು’; ನಟಿ ತಾರಾ

TV9 Web
| Edited By: |

Updated on: Jul 26, 2021 | 1:29 PM

Share

ಇಂದು (ಜು.26) ಸಂಜೆ ಬನಶಂಕರಿ ಚಿತಾಗಾರದಲ್ಲಿಜಯಂತಿ ಅಂತ್ಯಕ್ರಿಯೆ ನೆರವೇರಲಿದೆ. ಅಗಲಿಗೆ ನಟಿಗೆ ಚಂದನವನದ ಹಲವು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ನೂರಾರು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನಗೆದ್ದ ‘ಅಭಿನಯ ಶಾರದೆ’ ಜಯಂತಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಜು.26) ಕೊನೆಯುಸಿರೆಳೆದರು. ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಅವರು ನಟಿಸಿದ್ದರು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು. ಇಂದು (ಜು.26) ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಗಲಿಗೆ ನಟಿಗೆ ಚಂದನವನದ ಹಲವು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಜಯಂತಿ ಅವರನ್ನು ಹತ್ತಿರದಿಂದ ಕಂಡವರು ಹಿರಿಯ ನಟಿ ತಾರಾ. ಈಗ ಅವರು ಜಯಂತಿ ಬಗ್ಗೆ ಮಾತನಾಡಿದ್ದಾರೆ. ‘ಎರಡು-ಮೂರು ಬಾರಿ ಆಸ್ಪತ್ರೆ ಸೇರಿದಾಗಲೂ ನಾನು ಬಂದು ಬಿಡ್ತೀನಿ ಅಂದಿದ್ರು. ನಾನು ಹಾಗೆಯೇ ನಂಬಿದ್ದೆ. ಆದರೆ, ಆ ರೀತಿ ಆಗಲಿಲ್ಲ. ಅವರು ತಾಯಿ ಸ್ವರೂಪದಲ್ಲಿದ್ದರು’ ಎಂದು ನಟಿ ತಾರಾ ಭಾವುಕರಾಗಿದ್ದಾರೆ.

ಇದನ್ನೂ ಓದಿ: ‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್​ವುಡ್ ಶ್ರದ್ಧಾಂಜಲಿ