‘ಬಿಗ್ ಬಾಸ್’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸೆಲೆಬ್ರಿಟಿಗಳು ಫಿನಾಲೆ ಹಂತ ತಲುಪೋದರಲ್ಲಿ ಇದ್ದಾರೆ. ಈಗ ಬಿಗ್ ಬಾಸ್ ಫಿನಾಲೆ ಟಿಕೆಟ್ ನೀಡೋಕೆ ವಿಶೇಷ ಅತಿಥಿಗಳ ಆಗಮನ ಆಗಿದೆ. ಹಾಗಾದರೆ ಯಾರು ಅವರು? ಅವರು ಬಂದು ಟಿಕೆಟ್ ಕೊಟ್ಟಿದ್ದು ಯಾರಿಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಆಟ ದೊಡ್ಮನೆಯಲ್ಲಿ ನಡೆದಿದೆ. ಈ ಟಾಸ್ಕ್ ತುಂಬಾನೇ ಟಫ್ ಆಗಿತ್ತು. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ರಜತ್, ಭವ್ಯಾ, ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆಯುವ ರೇಸ್ನಲ್ಲಿ ಇದ್ದಾರೆ. ಈ ಟಾಸ್ಕ್ನ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಇತ್ತು. ಅದಕ್ಕೆ ಉತ್ತರ ಇನ್ನಷ್ಟೇ ಸಿಗಬೇಕಿದೆ. ಈ ಮಧ್ಯೆ ಫಿನಾಲೆ ಟಿಕೆಟ್ ನೀಡೋಕೆ ಅಧಿತಿ ಪ್ರಭುದೇವ ಹಾಗೂ ಶರಣ್ ಆಗಮಿಸಿದ್ದಾರೆ. ಅವರ ನಟನೆಯ ‘ಛೂಮಂತರ್’ ಸಿನಿಮಾ ರಿಲೀಸ್ ಆಗಿದೆ. ಅದರ ಪ್ರಚಾರಕ್ಕಾಗಿ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
