Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರ ವಹಿಸಿಕೊಂಡ ಬಳಿಕ ನೂತನ ಅಧ್ಯಕ್ಷರ ಜೊತೆ ಗ್ರೂಪ್ ಫೋಟೋಗಾಗಿ ನೂಕುನುಗ್ಗಲು!

ವಿಜಯೇಂದ್ರ ವಹಿಸಿಕೊಂಡ ಬಳಿಕ ನೂತನ ಅಧ್ಯಕ್ಷರ ಜೊತೆ ಗ್ರೂಪ್ ಫೋಟೋಗಾಗಿ ನೂಕುನುಗ್ಗಲು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 15, 2023 | 12:44 PM

ಸಮಾರಂಭದಲ್ಲಿ ಕೆಲ ನಾಯಕ ಅನುಪಸ್ಥಿತಿ ಕಂಡುಬಂದಿದ್ದು ನಿಜವಾದರೂ ಹಲವಾರು ಪ್ರಮುಖ ನಾಯಕರು ಹಾಜರಿದ್ದರು. ಅಧ್ಯಕ್ಷರ ಕೋಣೆಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಗ್ರೂಪ್ ಫೋಟೋಗಾಗಿ ವೇದಿಕೆ ಮೇಲೆ ಸೇರಿದರು.

ಬೆಂಗಳೂರು: ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮದ ವಾತಾವರಣ. ಬಿವೈ ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ಕೆಲ ನಾಯಕ ಅನುಪಸ್ಥಿತಿ ಕಂಡುಬಂದಿದ್ದು ನಿಜವಾದರೂ ಹಲವಾರು ಪ್ರಮುಖ ನಾಯಕರು ಹಾಜರಿದ್ದರು. ಅಧ್ಯಕ್ಷರ ಕೋಣೆಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ (Nalin KumAr Kateel) ಸೇರಿದಂತೆ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಗ್ರೂಪ್ ಫೋಟೋಗಾಗಿ ವೇದಿಕೆ ಮೇಲೆ ಸೇರಿದರು. ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಸಿಎನ್ ಅಶ್ವಥ್ ನಾರಾಯಣ, ಕೆಎಸ್ ಈಶ್ವರಪ್ಪ, ಬಿ ಶ್ರೀರಾಮುಲು, ಆರ್ ಅಶೋಕ, ಗೋವಿಂದ ಕಾರಜೋಳ, ಬೈರತಿ ಬಸವರಾಜ, ಮುನಿರತ್ನ ನಾಯ್ಡು, ಆರಗ ಜ್ಞಾನೇಂದ್ರ, ಗೋಪಾಲಯ್ಯ, ಪ್ರಭು ಚೌಹಾಣ್, ಸಂಸದರಾಗಿರುವ ತೇಜಸ್ವಿ ಸೂರ್, ಬಿವೈ ರಾಘವೇಂದ್ರ, ಭಗವಂತ ಖೂಬಾ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಕಾರ್ಯಕ್ರಮ ನಿರೂಪಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ