ಟಿವಿಕೆಗೆ ಬಂಬಲ ವಿಚಾರದಲ್ಲಿ ಭಿನ್ನಮತ: ಬಂಡಾಯ ಏಳ್ತಾರಾ ಎಐಎಡಿಎಂಕೆಯ ಕೆಲ ಶಾಸಕರು?
ತಮಿಳುನಾಡು ಸರ್ಕಾರ ರಚನೆ ಸಂಬಂಧ ಟಿವಿಕೆ ಬೆಂಬಲಿಸುವ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಟಿಪಿಎಸ್ ಹಾಗೂ ಷಣ್ಮುಗಂ ಬಣಗಳ ನಡುವೆ ಈ ಬಗ್ಗೆ ಒಡಕು ಮೂಡಿದ್ದು, 35 ಶಾಸಕರು ಟಿವಿಕೆ ಬೆಂಬಲಿಸುವ ಸಾಧ್ಯತೆಯಿದೆ. ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ವಿಜಯ್ ಅವರ ನಿರ್ಧಾರ ಭವಿಷ್ಯವನ್ನು ನಿರ್ಧರಿಸಲಿದೆ.
ಚೆನ್ನೈ, ಮೇ 06: ತಮಿಳುನಾಡು ಸರ್ಕಾರ ರಚನೆ ಸಂಬಂಧ ಟಿವಿಕೆ ಬೆಂಬಲಿಸುವ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಟಿಪಿಎಸ್ (TPS) ಬಣ ಮತ್ತು ಷಣ್ಮುಗಂ ಬಣಗಳ ನಡುವೆ ಈ ಕುರಿತು ಒಡಕು ಕಾಣಿಸಿಕೊಂಡಿದ್ದು, ಇದು ಎಐಎಡಿಎಂಕೆಗೆ ದೊಡ್ಡ ಆಘಾತ ನೀಡುವ ಸಾಧ್ಯತೆಯಿದೆ. 47 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಎಐಎಡಿಎಂಕೆ ಪಕ್ಷದಲ್ಲಿ 35 ಶಾಸಕರು ಬಂಡಾಯ ಎದ್ದರೆ ಸಂಕಷ್ಟ ಎದುರಾಗಲಿದೆ. ಮಹಾರಾಷ್ಟ್ರದ ಶಿವಸೇನೆ ವಿಭಜನೆಯ ಉದಾಹರಣೆಯ ಆಧಾರದಲ್ಲಿ ಹೊಸ ಲೆಕ್ಕಾಚಾರಗಳು ತಮಿಳುನಾಡಲ್ಲೀಗ ಶುರುವಾಗಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: May 06, 2026 01:24 PM
Follow Us
