Assembly Polls: ಕೋಲಾರ ಜಿಲ್ಲೆ ಕಾಂಗ್ರೆಸ್ ಶಿಬಿರದಲ್ಲಿ ತಳಮಳ, ಕೆಹೆಚ್ ಮುನಿಯಪ್ಪ ಬೆಂಬಲಿಗರ ಬಹಿರಂಗ ಬಂಡಾಯ

|

Updated on: Feb 03, 2023 | 12:58 PM

ಇಂದು ಕೋಲಾರಕ್ಕೆ ಆಗಮಿಸಿದ ಡಿಕೆ ಶಿವಕುಮಾರ ಪ್ರಜಾಧ್ವನಿ ಯಾತ್ರೆ ಮುದುವರಿಸಿದರಾದರೂ ಮುಳಬಾಗಿಲು ಕ್ಷೇತ್ರದ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಕೋಲಾರ:  ಯಾವಾಗ ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಿಂದ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದರೋ ಅಂದಿನಿಂದ ಕೋಲಾರ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ನಲ್ಲಿ ತಳಮಳ, ಮುನಿಸು, ಅಸಮಾಧಾನ ಮತ್ತು ಬಂಡಾಯ ಭುಗಿಲೆದ್ದಿವೆ. ಮಾಜಿ ಸಂಸದ ಕೆಹೆಚ್ ಮುನಿಯಪ್ಪ (KH Muniyappa) ಭಾರಿ ಅಸಂತಷ್ಟರಾಗಿರುವುದು ಒಂದು ಬಹಿರಂಗ ಸತ್ಯ. ಇಂದು ಕೋಲಾರಕ್ಕೆ ಆಗಮಿಸಿದ ಡಿಕೆ ಶಿವಕುಮಾರ (DK Shivakumar) ಪ್ರಜಾಧ್ವನಿ ಯಾತ್ರೆ ಮುದುವರಿಸಿದರಾದರೂ ಮುಳಬಾಗಿಲು ಕ್ಷೇತ್ರದ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Fri, 3 February 23

Follow us on