35 ಸಾವಿರ ರೂ. ಬೆಲೆಬಾಳುವ ಲ್ಯಾಪ್​ಟಾಪ್ 60 ಸಾವಿರಕ್ಕೆ ಖರೀದಿ.. ಅವ್ಯವಹಾರಕ್ಕೆ ಬಿತ್ತು ಬ್ರೇಕ್​

[lazy-load-videos-and-sticky-control id=”iMAUbXJHcMQ”]] ಬೆಂಗಳೂರು: ವಿದ್ಯಾರ್ಥಿಗಳ ಆನ್​ಲೈನ್ ಕ್ಲಾಸ್‌ಗಾಗಿ ಅನುಕೂಲವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿತ್ತು. ಆದರೆ ಲ್ಯಾಪ್​ಟಾಪ್ ಖರೀದಿಯಲ್ಲಿ ಭಾರಿ ಅವ್ಯವಹಾರ ಕಂಡುಬಂದಿದ್ದರಿಂದ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖರೀದಿಗೆ ತಡೆ ನೀಡಿದ್ದಾರೆ. ರಸ್ತೆ, ರಾಜಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ವಿದ್ಯಾರ್ಥಿಗಳ ಆನ್​ಲೈನ್ ತರಗತಿಗಳಿಗೆ ಸಹಾಯವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿ ಮಾಡಲು ಮುಂದಾಗಿತ್ತು. ಹೀಗಾಗಿ 115 ಕೋಟಿ ರೂಪಾಯಿ ಅಭಿವೃದ್ಧಿ ಹಣದಲ್ಲಿ KEONICS ಸಂಸ್ಥೆಯಿಂದ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿದ್ದ ಬಿಬಿಎಂಪಿ, 30ರಿಂದ 35 […]

35 ಸಾವಿರ ರೂ. ಬೆಲೆಬಾಳುವ ಲ್ಯಾಪ್​ಟಾಪ್ 60 ಸಾವಿರಕ್ಕೆ ಖರೀದಿ.. ಅವ್ಯವಹಾರಕ್ಕೆ ಬಿತ್ತು ಬ್ರೇಕ್​
ಸಾಧು ಶ್ರೀನಾಥ್​

Updated on: Aug 23, 2020 | 2:51 PM

[lazy-load-videos-and-sticky-control id=”iMAUbXJHcMQ”]]

ಬೆಂಗಳೂರು: ವಿದ್ಯಾರ್ಥಿಗಳ ಆನ್​ಲೈನ್ ಕ್ಲಾಸ್‌ಗಾಗಿ ಅನುಕೂಲವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿತ್ತು. ಆದರೆ ಲ್ಯಾಪ್​ಟಾಪ್ ಖರೀದಿಯಲ್ಲಿ ಭಾರಿ ಅವ್ಯವಹಾರ ಕಂಡುಬಂದಿದ್ದರಿಂದ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖರೀದಿಗೆ ತಡೆ ನೀಡಿದ್ದಾರೆ.

ರಸ್ತೆ, ರಾಜಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ವಿದ್ಯಾರ್ಥಿಗಳ ಆನ್​ಲೈನ್ ತರಗತಿಗಳಿಗೆ ಸಹಾಯವಾಗಲೆಂದು ಬಿಬಿಎಂಪಿ ಲ್ಯಾಪ್​ಟಾಪ್ ಖರೀದಿ ಮಾಡಲು ಮುಂದಾಗಿತ್ತು. ಹೀಗಾಗಿ 115 ಕೋಟಿ ರೂಪಾಯಿ ಅಭಿವೃದ್ಧಿ ಹಣದಲ್ಲಿ KEONICS ಸಂಸ್ಥೆಯಿಂದ ಲ್ಯಾಪ್​ಟಾಪ್ ಖರೀದಿಗೆ ಮುಂದಾಗಿದ್ದ ಬಿಬಿಎಂಪಿ, 30ರಿಂದ 35 ಸಾವಿರ ರೂಪಾಯಿ ಬೆಲೆಬಾಳುವ ಲ್ಯಾಪ್​ಟಾಪ್​ಗೆ, 60 ಸಾವಿರ ರೂಪಾಯಿ ನೀಡಿ ಖರೀದಿಸಲು ಮುಂದಾಗಿತ್ತು ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಬಗ್ಗೆ ಸಿಎಂ ಯಡಿಯೂರಪ್ಪರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಅಭಿವೃದ್ಧಿ ಹಣದಲ್ಲಿ ಲ್ಯಾಪ್​ಟಾಪ್ ಖರೀದಿಯ ಅವಶ್ಯಕತೆ ಇಲ್ಲ. ಈ ರೀತಿಯ ದುಂದು ವೆಚ್ಚಕ್ಕೆ ಬ್ರೇಕ್ ಹಾಕುವಂತೆ ಸಿಎಂಗೆ ಮನವರಿಕೆ ಮಾಡಿದ್ದಾರೆ.

ಆಯುಕ್ತರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಲ್ಯಾಪ್ ಟಾಪ್ ಖರೀದಿ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವ ಕಾರ್ಪೋರೇಟರ್ಸ್ ಲ್ಯಾಪ್ ಟಾಪ್ ಖರೀದಿ ಮಾಡಿ ಅಥವಾ ಆನ್​ಲೈನ್ ಕ್ಲಾಸ್ ರದ್ದು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಸರ್ಕಾರದ ಸೂಚನೆಯಂತೆ ಲ್ಯಾಪ್ ಟಾಪ್ ಖರೀದಿ ಮಾಡದಂತೆ ಜಂಟಿ ಆಯುಕ್ತರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.

Published On - 12:02 pm, Sun, 23 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us