ತಂದೆಯ ಅಂತ್ಯ ಸಂಸ್ಕಾರಕ್ಕೆ ಮಾಂಗಲ್ಯ ಸರ ಮಾರಲು ಮುಂದಾಗಿದ್ದ ಮಗಳು.. ನಿನ್ನೆ ರಾತ್ರಿ ಮತ್ತಿಕೆರೆ ಮನೆಯಲ್ಲಿ ಸಾವನ್ನಪ್ಪಿದ್ದ ಕೋವಿಡ್ ಸೋಂಕಿತ ತಂದೆ. ಬದುಕಿರಬಹುದು ಎಂದು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದರೆ ವೈದ್ಯರು ಚೆಕ್ ಮಾಡಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ರು. ಅದೇ ಆ್ಯಂಬುಲೆನ್ಸ್ ನಲ್ಲಿ ಹೆಬ್ಬಾಳದ ನಂದನ ಆ್ಯಂಬುಲೆನ್ಸ್ ಸರ್ವಿಸ್ ಗೆ ಕರೆತರಲಾಗಿತ್ತು.
ಕುಮಾರ್ ಆ್ಯಂಬುಲೆನ್ಸ್ ಮಾಲೀಕತ್ವದ ನಂದನ್ ಆ್ಯಂಬುಲೆನ್ಸ್. ಅಲೇ ಇದ್ದ ಖಾಸಗಿ ಶವಾಗಾರದಲ್ಲಿ ಮೃತದೇಹ ಇರಿಸಲಾಗಿತ್ತು.. ಮೃತದೇಹ ಇಡಲು ಮತ್ತು ಅಂತ್ಯಕ್ರಿಯೆಗೆ 60 ಸಾವಿರ ಡಿಮ್ಯಾಂಡ್ ಮಾಡಿದ ಆ್ಯಂಬುಲೆನ್ಸ್ ಸಿಬ್ಬಂದಿ . ಟಿವಿ9 ಕ್ಯಾಮೆರಾ ಕಂಡು ಸಿಬ್ಬಂದಿ ಥಂಡ.. ಸದ್ಯ 13 ಸಾವಿರ ಹಣ ಕಟ್ಟಿಸಿಕೊಂಡು ಮೃತದೇಹ ನೀಡಿದ ಸಿಬ್ಬಂದಿ. ಮಾರಲು ಬಿಚ್ಚಿಟ್ಟಿದ್ದ ಮಾಂಗಲ್ಯ ಸರ ಮತ್ತೆ ಕುತ್ತಿಗೆಗೆ ಹಾಕಿಕೊಂಡ ಮಹಿಳೆ.
(Ambulance staff demand rs 60 thousand for last rites tv9 intervenes to stop it)