ಪುಷ್ಪ ಸಿನಿಮಾ ಸ್ಟೈಲ್ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್: ಕಳ್ಳಸಾಗಣೆದಾರರ ಬೇಟೆಯಾಡಿದ ಪೊಲೀಸರು
ಆಂಧ್ರದ ನಲ್ಲಮಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಆಂಧ್ರ ಪೊಲೀಸರು ಸ್ಮಗ್ಲರ್ಗಳನ್ನು ಕರ್ನಾಟಕದ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿವರೆಗೆ ಚೇಸ್ ಮಾಡಿ ಬಂಧಿಸಿದ್ದಾರೆ. ರಕ್ತ ಚಂದನ ಜಪ್ತಿ ಮಾಡಿದ್ದಾರೆ. ನೀಲಗಿರಿ ತೋಪಿನಲ್ಲಿದ್ದ ಕೋಟಿ ಕೋಟಿ ಬೆಲೆ ಬಾಳುವ ರಕ್ತಚಂದನ ಜಪ್ತಿ ಮಾಡಲಾಗಿದೆ.
ದೇವನಹಳ್ಳಿ, ಫೆಬ್ರವರಿ 6: ಪುಷ್ಪ ಸಿನಿಮಾದ ರೀತಿಯಲ್ಲಿ ಆಂಧ್ರದ ನಲ್ಲಮಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಟ ಮಾಡುತ್ತಿದ್ದವರನ್ನು ಬೇಟೆಯಾಡಿದ ಆಂಧ್ರದ ಚಿತ್ತೂರು ಪೊಲೀಸರು, ನೀಲಗಿರಿ ತೋಪಿನಲ್ಲಿ ಅಡಗಿಸಿಟ್ಟಿದ್ದ 150 ರಕ್ತಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಬಳಿ ರಕ್ತಚಂದನ ತುಂಡು ಜಪ್ತಿ ಮಾಡಲಾಗಿದೆ.