ಮಾಜಿ ಸಿಎಂ ಕುಮಾರಸ್ವಾಮಿಗೆ ಕುಟುಕಿದ ಶಿವಲಿಂಗೇಗೌಡ್ರು, ಇಡೀ ಸದನದಲ್ಲಿ ನಗುವೇ ನಗು!

ಸಾಧು ಶ್ರೀನಾಥ್​

Updated on: Jul 05, 2023 | 6:21 PM

ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿಲ್ವಾ? ನಾವು ನಿಮ್ಮನ್ನು ಕುಮಾರಣ್ಣ ಅನ್ನಲ್ವಾ ಎಂದ ಕೆ.ಎಂ.ಶಿವಲಿಂಗೇಗೌಡರು ವಿಶ್ವಾಸ ಇದ್ದಾಗ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ. ನಾವೇನು‌ ನಿಮ್ಮನ್ನು ಹೆಸರು ಹೇಳಿ ಕರೆಯುತ್ತೀವಾ? ಎಂದು ದಬಾಯಿಸತೊಡಗಿದರು.

ಇಂದಿನ ವಿಧಾನಸಭೆ ಕಲಾಪದ (Assembly Session) ವೇಳೆ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆ ನಡೆಯಿತು. ನಿಯಮ 69ರಡಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಕುರಿತು ಚರ್ಚೆ ಆರಂಭವಾಯಿತು. ವಿಧಾನಸಭೆಯಲ್ಲಿ ಚರ್ಚೆ ಆರಂಭಿಸಿದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಹಾಸನ ಜಿಲ್ಲೆಯ ಶಾಸಕರೊಬ್ಬರು ಎಂದರು. ಆಗ ಧಿಡಿಗ್ಗನೇ ಎದ್ದು ನಿಂತ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ಎಂ. ಶಿವಲಿಂಗೇಗೌಡ (Arsikere Congress MLA Shivalinge gowda) ಅವರು ನಾನು ಹೆಸರು ಇಟ್ಟುಕೊಂಡೇ ಬಂದಿದ್ದೇನೆ, ಕಸುವು ಇಲ್ಲದೇ ಬಂದಿಲ್ಲ. ಅದ್ಯಾಕೆ ಹಾಸನ ಜಿಲ್ಲೆಯ ಶಾಸಕರು ಅಂತೀರಾ, ನನ್ನ ಹೆಸರು ಹೇಳಿ. ನಿಮಗೆ 10 ಲಕ್ಷ ಜನ ಇದ್ದರೆ ನನಗೆ ಎರಡು ಲಕ್ಷ ಜನ ಇದ್ದಾರೆ. 5 ಸಾವಿರ ಜನರು ನನ್ನ ಬಳಿ ಸೆಲ್ಫಿ ತಗೊಂಡಿದ್ದಾರೆ ಎಂದು ಶಿವಲಿಂಗೇಗೌಡ ಗುಡುಗಿದರು.

ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿಲ್ವಾ? ನಾವು ನಿಮ್ಮನ್ನು ಕುಮಾರಣ್ಣ ಅನ್ನಲ್ವಾ ಎಂದ ಕೆ.ಎಂ.ಶಿವಲಿಂಗೇಗೌಡರು ವಿಶ್ವಾಸ ಇದ್ದಾಗ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ. ನಾವೇನು‌ ನಿಮ್ಮನ್ನು ಹೆಸರು ಹೇಳಿ ಕರೆಯುತ್ತೀವಾ? ಎಂದು ದಬಾಯಿಸತೊಡಗಿದರು. ಅದಕ್ಕೆ ತಣ್ಣಗಾದ ಹೆಚ್​ಡಿಕೆ, ಆಯ್ತು ಆಯ್ತು ಸ್ವಲ್ಪ ಕೇಳಿ ಶಿವಲಿಂಗೇಗೌಡರೇ ಎಂದು ಸಮಾಧಾನದ ದನಿಯಲ್ಲಿ ಹೇಳಿದರು. ಬಳಿಕ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸುಮ್ಮನಾದರು.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು