AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Session: ರೈತ ನಾಯಕನ ಮಗ ದರ್ಶನ್ ಪುಟ್ಟಣ್ಣಯ್ಯ ತಂದೆಯ ಖ್ಯಾತಿಗನುಗುಣವಾಗಿ ಸದನದಲ್ಲಿ ರೈತರ ಸಮಸ್ಯೆ ಪ್ರಸ್ತಾಪಿಸಿದರು!

Budget Session: ರೈತ ನಾಯಕನ ಮಗ ದರ್ಶನ್ ಪುಟ್ಟಣ್ಣಯ್ಯ ತಂದೆಯ ಖ್ಯಾತಿಗನುಗುಣವಾಗಿ ಸದನದಲ್ಲಿ ರೈತರ ಸಮಸ್ಯೆ ಪ್ರಸ್ತಾಪಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 05, 2023 | 7:06 PM

Share

ಎಣ್ಣೆ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ವಿದೇಶಿ ಮೂಲದ ಕಂಪನಿಗಳಿಂದ ಮತ್ತು ಕೃಷಿ ಉದ್ಯಮಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದು ದರ್ಶನ್ ಹೇಳಿದರು.

ಬೆಂಗಳೂರು: ದರ್ಶನ್ ಪುಟ್ಟಣ್ಣಯ್ಯ (darshan Puttannaiah) ಒಬ್ಬ ರೈತನಾಯಕನ ಮಗ ಮತ್ತು ತಮ್ಮ ದಿವಂಗತ ತಂದೆ ಕೆಎಸ್ ಪುಟ್ಟಣ್ಣಯ್ಯರ (KS Puttannaiah) ವರ್ಚಸ್ಸು ಮತ್ತು ಖ್ಯಾತಿಗೆ ತಕ್ಕಂತೆ ಇಂದು ವಿಧಾನ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದರು. ಖಾದ್ಯತೈಲ (edible oil) ಅದರಲ್ಲೂ ನಿರ್ದಿಷ್ಟವಾಗಿ ತಾಳೆ ಎಣ್ಣೆ ಬಗ್ಗೆ ಮಾತಾಡಿದ ಅವರು, ಎಣ್ಣೆ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ವಿದೇಶಿ ಮೂಲದ ಕಂಪನಿಗಳಿಂದ ಮತ್ತು ಕೃಷಿ ಉದ್ಯಮಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ ಎಂದರು. ಖಾದ್ಯ ತೈಲಗಳ ಮೇಲೆ ಆಮದು ಶುಲ್ಕ ಕಡಿಮೆ ಇರೋದ್ರಿಂದ ಉದ್ಯಮಿಗಳು ಸುಮಾರು ರೂ. 70,000 ಕೋಟಿ ಮೌಲ್ಯದಷ್ಟು ಖಾದ್ಯ ಎಣ್ಣೆಗಳನ್ನು ಹೊರದೇಶಗಳಿಂದ ಅಮದು ಮಾಡಿಕೊಳ್ಳುತ್ತಿದ್ದಾರೆ ಎಂದು ದರ್ಶನ್ ಹೇಳಿದರು. ದೇಶದಲ್ಲಿ ಉತ್ಪನ್ನವಾಗುವ ಎಣ್ಣೆಗಳಿಗೆ ಬೇಡಿಕೆ ಸೃಷ್ಟಿಸಿದರೆ ಆಮದು ಪೀಡೆಯನ್ನು ತಪ್ಪಿಸಬಹುದು ಎಂದು ಹೇಳಿದ ಅವರು ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ