ಕಲಾವಿದನ ಕುಂಚದಲ್ಲಿ ಅರಳಿದ ಮೈಸೂರು ಅರಸರ ಗಂಧದ ಅರಮನೆಯ ಇತಿಹಾಸ

Edited By:

Updated on: Oct 12, 2025 | 2:42 PM

ಈ ಹಿಂದೆ ಇದ್ದ ಮೈಸೂರು ಮಹಾರಾಜರ ಗಂಧದ ಅರಮನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಕೆ ಆರ್ ಮೊಹಲ್ಲಾದ ನಿವಾಸಿ ನಂದನ್ ಅವರು ಮರದಿಂದ ಮೈಸೂರು ಅರಮನೆಯ ಕಲಾಕೃತಿ ನಿರ್ಮಿಸಿದ್ದಾರೆ. ಅರಮನೆ ಜೊತೆಗೆ ಇತಿಹಾಸ ಸಾರುವ ಧ್ವನಿ‌ ಹಾಗೂ ಬೆಳಕು ಅಳವಡಿಸಿದ್ದಾರೆ. ಗಂಧದ ಅರಮನೆ‌ ಬೆಂಕಿ ಅವಘಡದ ಚಿತ್ರಣ, ಹೊಸ ಅರಮನೆ ನಿರ್ಮಾಣವಾದ ಇತಿಹಾಸವನ್ನು ತಮ್ಮ ಕಲಾಕೃತಿ ಮೂಲಕ ತೆರೆದಿಟ್ಟಿದ್ದಾರೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹಾಗಾದ್ರೆ, ಮೈಸೂರು ಮಹಾರಾಜರ ಈ ಹಿಂದನ ಗಂಧದ ಅರಮನೆ ಹೇಗಿತ್ತು ಎನ್ನುವುದನ್ನು ನೋಡಿ.

ಮೈಸೂರು, (ಅಕ್ಟೋಬರ್ 12): ಈ ಹಿಂದೆ ಇದ್ದ ಮೈಸೂರು ಮಹಾರಾಜರ ಗಂಧದ ಅರಮನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಕೆ ಆರ್ ಮೊಹಲ್ಲಾದ ನಿವಾಸಿ ನಂದನ್ ಅವರು ಮರದಿಂದ ಮೈಸೂರು ಅರಮನೆಯ ಕಲಾಕೃತಿ ನಿರ್ಮಿಸಿದ್ದಾರೆ. ಅರಮನೆ ಜೊತೆಗೆ ಇತಿಹಾಸ ಸಾರುವ ಧ್ವನಿ‌ ಹಾಗೂ ಬೆಳಕು ಅಳವಡಿಸಿದ್ದಾರೆ. ಗಂಧದ ಅರಮನೆ‌ ಬೆಂಕಿ ಅವಘಡದ ಚಿತ್ರಣ, ಹೊಸ ಅರಮನೆ ನಿರ್ಮಾಣವಾದ ಇತಿಹಾಸವನ್ನು ತಮ್ಮ ಕಲಾಕೃತಿ ಮೂಲಕ ತೆರೆದಿಟ್ಟಿದ್ದಾರೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹಾಗಾದ್ರೆ, ಮೈಸೂರು ಮಹಾರಾಜರ ಈ ಹಿಂದನ ಗಂಧದ ಅರಮನೆ ಹೇಗಿತ್ತು ಎನ್ನುವುದನ್ನು ನೋಡಿ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More