AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭದ್ರಾ ನಾಲೆಯ ನೀರಲ್ಲಿ ಕೊಚ್ಚಿಹೋದ ಬಾಲಕ: ಮುಂದುವರಿದ ಶೋಧ

ಭದ್ರಾ ನಾಲೆಯ ನೀರಲ್ಲಿ ಕೊಚ್ಚಿಹೋದ ಬಾಲಕ: ಮುಂದುವರಿದ ಶೋಧ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಪ್ರಸನ್ನ ಹೆಗಡೆ|

Updated on: Oct 12, 2025 | 12:57 PM

Share

ಭದ್ರಾ ನಾಲೆಯ ನೀರಲ್ಲಿ ಬಾಲಕನೋರ್ವ ಕೊಚ್ಚಿಹೋಗಿರುವ ಘಟನೆ ಲಿಂಗದಹಳ್ಳಿ ಗ್ರಾಮ ಸಮೀಪ ನಡೆದಿದೆ. ಮನೋಜ್ (9) ಕೊಚ್ಚಿ ಹೋಗಿರುವ ಬಾಲಕನಾಗಿದ್ದು, ಅಗ್ನಿಶಾಮಕದಳ ಹಾಗೂ ಈಜುಗಾರರ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜತೆಗೆ ಬಾಲಕ ತೆರಳಿದ್ದ ವೇಳೆ ಅವಘಡ ನಡೆದಿದ್ದು, ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ, ಅಕ್ಟೋಬರ್​ 12: ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜತೆಗೆ ನಾಲೆ ಬಳಿ ಬಂದಿದ್ದ ಬಾಲಕ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಲಿಂಗದಹಳ್ಳಿ ಗ್ರಾಮ ಸಮೀಪದ ಭದ್ರಾ ನಾಲೆಯಲ್ಲಿ (Bhadra Canal ನಡೆದಿದೆ. 3ನೇ ತರಗತಿ ಓದುತ್ತಿದ್ದ ಮನೋಜ್ (9) ಕೊಚ್ಚಿ ಹೋಗಿರುವ ಬಾಲಕನಾಗಿದ್ದು, ಅಗ್ನಿಶಾಮಕದಳ ಹಾಗೂ ಈಜುಗಾರರ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಮನೋಜ್​, ಆವರಗೆರೆ ಗೋಶಾಲೆ ನಿವಾಸಿ ಷಣ್ಮುಖಾಚಾರಿ ಎಂಬವರ ಮಗನಾಗಿದ್ದು, ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.