Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನ ಸೌಧ ಒಂದು ದೇವಾಲಯ; ಅದರೊಳಗೆ ಪ್ರವೇಶಿಸಿ ಜನಸೇವೆ ಮಾಡಲು ಪುಣ್ಯ ಮಾಡಿರಬೇಕು: ಬಿಎಸ್ ಯಡಿಯೂರಪ್ಪ

ವಿಧಾನ ಸೌಧ ಒಂದು ದೇವಾಲಯ; ಅದರೊಳಗೆ ಪ್ರವೇಶಿಸಿ ಜನಸೇವೆ ಮಾಡಲು ಪುಣ್ಯ ಮಾಡಿರಬೇಕು: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 24, 2023 | 5:37 PM

ಚುನಾವಣಾ ರಾಜಕೀಯ ದೂರವಾಗುತ್ತಿದ್ದರೂ ಪಕ್ಷ ಸಂಘಟನೆ ತಮ್ಮನ್ನು ತೊಡಗಿಸಿಕೊಂಡು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡುತ್ತಾ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಯಡಿಯೂರಪ್ಪ ಹೇಳಿದರು.

ಬೆಂಗಳೂರು: 1983ರಿಂದ ಇಲ್ಲಿಯವರೆಗೆ ವಿಧಾನ ಸಭೆಯ ಅವಿಭಾಜ್ಯ ಅಂಗವಾಗಿದ್ದ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಇನ್ನು ಏನಿದ್ದರೂ ಸದಸದ ಹೊರಗಿನಿಂದಲೇ ಪಕ್ಷಕ್ಕಾಗಿ ಕೆಲಸ ಮಾಡಲಿದ್ದಾರೆ. ವಿಧಾನ ಸಭೆಯೊಂದಿಗೆ ನಾಲ್ಕ ದಶಕಗಳ ಒಡನಾಟದ ಬಗ್ಗೆ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ವಿಧಾನ ಮಂಡಲ ಒಂದು ದೇವಾಲಯವಿದ್ದ (temple) ಹಾಗೆ, ಅದರೊಳಗೆ ಕೂತು ಜನರಿಗಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ ಎಂದು ಅವರು ಹೇಳಿದರು. ತಾವೀಗ ಚುನಾವಣಾ ರಾಜಕೀಯ (electoral politics) ದೂರವಾಗುತ್ತಿದ್ದರೂ ಪಕ್ಷ ಸಂಘಟನೆ ತಮ್ಮನ್ನು ತೊಡಗಿಸಿಕೊಂಡು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡುತ್ತಾ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಲು ಹರಲಿರುಳು ಶ್ರಮಿಸುವುದಾಗಿ ಯಡಿಯೂರಪ್ಪ ಹೇಳಿದರು. ಪಕ್ಷ ಒಪ್ಪಿದಲ್ಲಿ ಬಿವೈ ವಿಜಯೇಂದ್ರ ತಮ್ಮ ಉತ್ತರಾಧಿಕಾರಿಯಾಗುವ ಸುಳಿವನ್ನು ಅವರು ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ