AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pen Drive: ನನ್ನ ಬಳಿಯೂ ಪೆನ್​ ಡ್ರೈವ್ ಇದೆ ಅಂದ್ರು ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿ!

Pen Drive: ನನ್ನ ಬಳಿಯೂ ಪೆನ್​ ಡ್ರೈವ್ ಇದೆ ಅಂದ್ರು ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿ!

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Aug 11, 2023 | 4:41 PM

Share

Laxman Savadi: ಪೆನ್​ಡ್ರೈವ್ ಇರುವ ಸುಳಿವು ನೀಡಿರುವ ಲಕ್ಷ್ಮಣ್ ಸವದಿ, ಆ ಪೆನ್​ಡ್ರೈವ್ ಯಾರಿಗೆ ಸಂಬಂಧಸಿದ್ದೋ ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿಲ್ಲ. ಪದೇ ಪದೇ ಸುದ್ದಿಯಾಗುತ್ತಿರವ ಪೆನ್​ಡ್ರೈವ್​ನೊಳಗಿರುವ ಸತ್ಯ, ಅದ್ಯಾವಾಗ ಸ್ಫೋಟಗೊಳ್ಳುತ್ತೋ ಕಾದು ನೋಡಬೇಕಿದೆ.

ಅಥಣಿ (ಬೆಳಗಾವಿ) ಆಗಸ್ಟ್​ 11: ರಾಜ್ಯ ರಾಜಕೀಯದಲ್ಲಿ ಮತ್ತೆ ಪೆನ್​ಡ್ರೈವ್ ಸದ್ದು ಮಾಡ್ತಿದೆ. ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಪೆನ್​ಡ್ರೈವ್ ತೋರಿಸಿ ಸಂಚಲನ ಸೃಷ್ಟಿಸಿದ್ರೆ, ಈಗ ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿಯೂ (Congress MLA Laxman Savadi) ಪೆನ್​ಡ್ರೈವ್ ಬಾಂಬ್ ಹಾಕಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಪೆನ್​ಡ್ರೈವ್ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್​ನ ಕುಮಾರಸ್ವಾಮಿಯವರ ಪೆನ್​ಡ್ರೈವ್​ಗೆ ಪ್ರತಿಯಾಗಿ ಕಾಂಗ್ರೆಸ್​ನ ಲಕ್ಷ್ಮಣ ಸವದಿ ಪೆನ್​ಡ್ರೈವ್ (Pen Drive) ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ. ನನ್ನ ಬಳಿಯೂ ಪೆನ್​ಡ್ರೈವ್ ಇರೋದು ಸತ್ಯ ಎಂದು ಬೆಳಗಾವಿಯ (Belagavi) ಅಥಣಿಯಲ್ಲಿ (Athani) ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೊತೆಗೆ ನನ್ನ ಬಳಿ ಇರುವ ಪೆನ್​ಡ್ರೈವ್​​ನಲ್ಲಿ ಯಾರು ಏನೇನು ಕುತಂತ್ರ ಮಾಡ್ತಿದ್ರು ಅನ್ನೋ ವಿವರವಿದೆ ಎಂದಿದ್ದಾರೆ.

ಪೆನ್​ಡ್ರೈವ್ ಇರುವ ಸುಳಿವು ನೀಡಿರುವ ಲಕ್ಷ್ಮಣ್ ಸವದಿ, ಆ ಪೆನ್​ಡ್ರೈವ್ ಯಾರಿಗೆ ಸಂಬಂಧಸಿದ್ದೋ ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿಲ್ಲ. ಪದೇ ಪದೇ ಸುದ್ದಿಯಾಗುತ್ತಿರವ ಪೆನ್​ಡ್ರೈವ್​ನೊಳಗಿರುವ ಸತ್ಯ, ಅದ್ಯಾವಾಗ ಸ್ಫೋಟಗೊಳ್ಳುತ್ತೋ ಕಾದು ನೋಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 11, 2023 04:39 PM

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು