AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elephant Census: ಆನೆಗಳಿಗೂ ಬಂಡೀಪುರ ಅಂದ್ರೆ ಪಂಚಪ್ರಾಣ!

Elephant Census: ಆನೆಗಳಿಗೂ ಬಂಡೀಪುರ ಅಂದ್ರೆ ಪಂಚಪ್ರಾಣ!

ಸೂರಜ್ ಪ್ರಸಾದ್ ಎಸ್.ಎನ್
| Edited By: ಸಾಧು ಶ್ರೀನಾಥ್​|

Updated on: Aug 11, 2023 | 3:55 PM

Share

Bandipur, Chamarajanagar: ರಾಜ್ಯ ಸರ್ಕಾರದಿಂದ ಆನೆ ಗಣತಿಯೂ ಬಿಡುಗಡೆಯಾಗಿದ್ದು ಅತಿ ಹೆಚ್ಚು ಆನೆ, ಹುಲಿ, ಚಿರತೆ ಹೊಂದಿರುವ ವನ್ಯಜೀವಿಗಳು ಬೀಡು ಬಂಡೀಪುರವಾಗಿದೆ.

Elephant Census: ಅದೊಂದು ದೇಶದ ಪ್ರಸಿದ್ದ ಹುಲಿ ಸಂರಕ್ಷಿತಾರಣ್ಯ.ವನ್ಯಜೀವಿಗಳ ಆವಾಸ ಸ್ಥಾನ.ಕಳೆದ ತಿಂಗಳು ಬಿಡುಗಡೆಯಾದ ಹುಲಿ ಗಣತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು.ಆದ್ರಿಗಾ ರಾಜ್ಯ ಸರ್ಕಾರದಿಂದ ಆನೆ ಗಣತಿಯೂ ಬಿಡುಗಡೆಯಾಗಿದ್ದು ರಾಜ್ಯಕ್ಕೆ ನಂಬರ್ ಒನ್ ಆಗಿದೆ.ಅತಿ ಹೆಚ್ಚು ಆನೆ,ಹುಲಿ,ಚಿರತೆ ಹೊಂದಿರುವ ವನ್ಯಜೀವಿಗಳು ಬೀಡು ಬಂಡೀಪುರವಾಗಿದೆ (Bandipur, Chamarajanagar).ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ 50 ನೇ ವರ್ಷದ ಸಂಭ್ರಮದಲ್ಲಿದೆ.ಈ ಸಂಭ್ರಮವೂ ಡಬಲ್ ಆಗುವಂತಹ ಘಟನೆಗಳು ಮತ್ತೇ ಮತ್ತೇ ಮರುಕಳಿಸ್ತಿದೆ.ಕಳೆದ ತಿಂಗಳು ಭಾರತ ಸರ್ಕಾರದಿಂದ ಹುಲಿ ಗಣತಿಯ ವರದಿ ಬಿಡುಗಡೆ ಆಗಿತ್ತು.

ಆ ವೇಳೆ ಬಂಡೀಪುರ ಇಡೀ ದೇಶದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಎರಡನೇ ಹಾಗೂ ರಾಜ್ಯದಲ್ಲಿ ನಂಬರ್ ಒನ್ ಅರಣ್ಯ ಪ್ರದೇಶವಾಗಿ ಹೊರಹೊಮ್ಮಿತ್ತು.ಈ ಮೂಲಕ ಬಂಡೀಪುರದ ಹೆಮ್ಮೆ ಇಡೀ ರಾಷ್ಟ್ರಕ್ಕೆ ಮತ್ತಷ್ಟು ಪಸರಿಸಿತ್ತು.ಅಂಕಿ ಅಂಶಗಳ ಪ್ರಕಾರ ಬಂಡೀಪುರದಲ್ಲಿ 191 ಹುಲಿಗಳು ಪತ್ತೆಯಾಗಿದ್ದು,ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಅರಣ್ಯ ಎಂದು ಗುರುತಿಸಿಕೊಂಡಿತ್ತು.ಇದೀಗ ಕಳೆದ ಮೇ ತಿಂಗಳಲ್ಲಿ ಹುಲಿ ಗಣತಿಯಂತೆ ಆನೆ ಗಣತಿಯೂ ಕೂಡ ರಾಜ್ಯದ ಎಲ್ಲಾ ಅರಣ್ಯ ಪದೇಶದಲ್ಲೂ ಕೂಡ ನಡೆದಿತ್ತು.ಇದೀಗ ಅದರ ವರದಿ ಬಿಡುಗಡೆಯಾಗಿದ್ದು ಬಂಡೀಪುರದಲ್ಲಿ 1116 ಹುಲಿಗಳು ಪತ್ತೆಯಾಗಿವೆ.ಆ ಮೂಲಕ ಬಂಡೀಪುರ ರಾಜ್ಯದಲ್ಲಿ ಹುಲಿಯಷ್ಟೇ ಅಲ್ಲದೇ ಆನೆ ಗಣತಿಯಲ್ಲೂ ನಂಬರ್ ಒನ್ ಆಗಿದೆ -ರಮೇಶ್ ಕುಮಾರ್, ಸಿಎಫ್ ಬಂಡೀಪುರ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More