ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಪಂಚಾಮೃತ ಅಭಿಷೇಕ

Updated on: Jan 11, 2025 | 3:41 PM

ಮಂತ್ರ ಪಠಣ, ಪಂಚಾಮೃತಾಭಿಷೇಕ, ಚಿನ್ನ- ಬೆಳ್ಳಿ ದಾರದಿಂದ ಮಾಡಿದ ಬಟ್ಟೆಗಳನ್ನು ಹಾಕುವ ಮೂಲಕ ಅಯೋಧ್ಯೆಯ ರಾಮಮಂದಿರದ ಮೊದಲ ವಾರ್ಷಿಕೋತ್ಸವದ ದಿನವಾದ ಇಂದು ರಾಮಲಲ್ಲಾವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವದಂದು ಅಯೋಧ್ಯಾ ರಾಮ ದೇವಾಲಯದಲ್ಲಿ ಮೂರು ದಿನಗಳ ಭವ್ಯ ಪ್ರತಿಷ್ಠಾ ದ್ವಾದಶಿ ಆಚರಣೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ರಾಮಲಲ್ಲಾಗೆ ಮಂತ್ರಗಳ ಪಠಣದೊಂದಿಗೆ ಪಂಚಾಮೃತದಿಂದ ಅಭಿಷೇಕ ನೆರವೇರಿಸಲಾಯಿತು. ಬಾಲ ರಾಮನನ್ನು ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.

ಅಯೋಧ್ಯೆ: ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವವನ್ನು ಇಂದು ಅಯೋಧ್ಯೆಯಲ್ಲಿ ಆಚರಿಸಲಾಗುತ್ತಿದೆ. ಈ ಭವ್ಯ ಕಾರ್ಯಕ್ರಮವು ರಾಮಲಲ್ಲಾನ ಆರತಿ ಮತ್ತು ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಯಿತು. ರಾಮಲಲ್ಲಾ ವಿಗ್ರಹವನ್ನು ಮೊದಲು ಮಂತ್ರ ಪಠಣದೊಂದಿಗೆ ಪಂಚಾಮೃತದಿಂದ ಅಭಿಷೇಕ ಮಾಡಲಾಯಿತು. ಪಂಚಾಮೃತ ಅಭಿಷೇಕದ ನಂತರ, ರಾಮಲಲ್ಲಾಗೆ ಗಂಗಾಜಲದಿಂದ ಸ್ನಾನ ಮಾಡಿಸಲಾಯಿತು. ಇದರ ನಂತರ, ರಾಮಲಲ್ಲಾನನ್ನು ಚಿನ್ನ ಮತ್ತು ಬೆಳ್ಳಿ ದಾರಗಳಿಂದ ನೇಯ್ದ ಬಟ್ಟೆಯಿಂದ ಅಲಂಕರಿಸಲಾಯಿತು. ನಂತರ ಚಿನ್ನದ ಕಿರೀಟ, ಚಿನ್ನದ ಹಾರ ಮತ್ತು ಇತರ ಆಭರಣಗಳಿಂದ ಅಲಂಕರಿಸಲಾಯಿತು. ಈ ಅದ್ಭುತ ಅಲಂಕಾರದ ನಂತರ, ಭಕ್ತರು ರಾಮಲಲ್ಲಾನ ದರ್ಶನ ಪಡೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More