Video: ಹೇಗಿದೆ ನೋಡಿ ಜೋಡೆತ್ತು, ಜೋಡು ಕುದುರೆ ಓಟದ ಸ್ಪರ್ಧೆ: ಕೇಕೆ ಹಾಕಿ ಸಂಭ್ರಮಿಸಿದ ರೈತರು

Edited By:

Updated on: Aug 27, 2023 | 8:19 PM

ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ಸದಾಶಿವ ಮುತ್ಯಾ ಅವರ ಜಾತ್ರೆ ಪ್ರಯುಕ್ತವಾಗಿ, ಜೋಡೆತ್ತು, ಜೋಡು ಕುದುರೆ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. ಎರಡು ನಿಮಿಷದಲ್ಲಿ ಅತಿವೇಗ ಓಡಿದ ಜೋಡೆತ್ತು, ಜೋಡು ಕುದುರೆಗೆ ಸೂಕ್ತ ಬಹುಮಾನ ಕೂಡ ನೀಡಲಾಗಿದ್ದು, ಓಟ ಕಂಡು ರೈತರು ಖುಷಿ ಪಟ್ಟರು.    

ಬಾಗಲಕೋಟೆ, ಆಗಸ್ಟ್​ 27: ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಡೆದ ಜೋಡೆತ್ತು, ಜೋಡು ಕುದುರೆ ಓಟ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು. ಗ್ರಾಮದ ಸದಾಶಿವ ಮುತ್ಯಾ ಅವರ ಜಾತ್ರೆ ಹಿನ್ನೆಲೆ ಆಯೋಜಿಸಿದ್ದ ಓಟ ಸ್ಪರ್ಧೆ ನೋಡುಗರಿಗೆ ಭರ್ಜರಿ ಹುರುಪು ನೀಡಿದೆ. ಜೋಡು ಕುದುರೆ, ಜೋಡೆತ್ತು ಓಟ ನೋಡಿದ ರೈತರು (Farmers) ಕೇಕೆ ಹಾಕಿ ಸಂಭ್ರಮಿಸಿದರು. ಎರಡು ನಿಮಿಷದಲ್ಲಿ ಅತಿವೇಗ ಓಡಿದ ಜೋಡೆತ್ತು, ಜೋಡು ಕುದುರೆಗೆ ಸೂಕ್ತ ಬಹುಮಾನ ಕೂಡ ನಿಗದಿ ಮಾಡಲಾಗಿತ್ತು. ವರ್ಷವಿಡೀ ದುಡಿದ ರೈತರು ಜೋಡೆತ್ತು, ಜೋಡು ಕುದುರೆ ಓಟ ಮನರಂಜನೆಯಂತಿದ್ದು, ಓಟ ಕಂಡು ಖುಷಿ ಪಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Aug 27, 2023 08:17 PM
Follow Us
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More