ಬಾಗಲಕೋಟೆ, ಜೂನ್ 06: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ನಿರ್ಮಾಣ ಆದಾಗಿನಿಂದ ಸಾಕಷ್ಟು ರಾಮ ಭಕ್ತರು ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ರಾಮ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಆದರೆ ಅಯೋಧ್ಯೆವರೆಗೂ ಪಾದಯಾತ್ರೆ ಮಾಡಿದ ಇಲ್ಲೊಬ್ಬ ರಾಮ ಭಕ್ತನಿಗೆ ಗರ್ಭಗುಡಿ ದ್ವಾರದ ಮುಂದೆ ನಿಂತು ರಾಮನ ದರ್ಶನಕ್ಕೆ ಅವಕಾಶ ಸಿಗದಿದ್ದಕ್ಕೆ ನಿರಾಸೆ ಆಗಿದೆ. ಈ ಕುರಿತಾಗಿ ವಿಡಿಯೋ ಮಾಡಿರುವ ಬಾಗಲಕೋಟೆ (Bagalkote) ಜಿಲ್ಲೆ ಇಳಕಲ್ ತಾಲ್ಲೂಕಿನ ಬಂಡರಗಲ್ ಗ್ರಾಮದ ಮುತ್ತು ಕರಮುಡಿ, ಏಪ್ರಿಲ್ 1 ರಂದು ಬಂಡರಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 1 ಕ್ಕೆ 2000 ಕಿಮೀ ಪಾದಯಾತ್ರೆ ಮೂಲಕ ಬಂದು ತಲುಪಿದ್ದಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಲವ್ ಜಿಹಾದ್ ನಡೆಯಬಾರದು. ಹಿಂದು ಹೆಣ್ಮಕ್ಕಳ ರಕ್ಷಣೆಯಾಗಬೇಕು ಹೀಗೆ ಹಲವು ಹರಕೆ ಹೊತ್ತು ಅಯೋಧ್ಯೆ ಪಾದಯಾತ್ರೆ ಕೈಗೊಂಡಿದ್ದರು. ನನ್ನ ಹರಕೆಗಳಲ್ಲಿ ಒಂದಾದ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ಈಡೇರಿದಂತಾಗಿದೆ. ನನ್ನ ಎಲ್ಲ ಹರಕೆಗಳನ್ನು ರಾಮನ ಗರ್ಭಗುಡಿ ದ್ವಾರದ ಮುಂದೆ ನಿಂತು ಬೇಡಿಕೊಳ್ಳಬೇಕು. ರಾಮನಿಗೆ ಅರ್ಪಿಸಬೇಕು. ಆದರೆ ಗರ್ಭಗುಡಿ ಮುಂದೆ ನಿಂತು ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಇಲ್ಲಿ ಪಾದಯಾತ್ರೆ ಮಾಡಿಕೊಂಡು ಬಂದವರಿಗೆ ಬೆಲೆಕೊಡುತ್ತಿಲ್ಲ. ಅಯೋಧ್ಯೆ ಕಮೀಟಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಗರ್ಭಗುಡಿ ಮುಂದೆ ನಿಂತು ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.