AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ರಮೇಶ್ ಜಾರಕಿಹೊಳಿಯಂತೆ ದಿಟ್ಟತನ ಪ್ರದರ್ಶಿಸಲು ಮಹೇಶ್ ಕುಮಟಳ್ಳಿಗೆ ಸಲಹೆ ನೀಡಿದ ಬಸನಗೌಡ ಯತ್ನಾಳ್

Karnataka Assembly Polls: ರಮೇಶ್ ಜಾರಕಿಹೊಳಿಯಂತೆ ದಿಟ್ಟತನ ಪ್ರದರ್ಶಿಸಲು ಮಹೇಶ್ ಕುಮಟಳ್ಳಿಗೆ ಸಲಹೆ ನೀಡಿದ ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 26, 2023 | 4:13 PM

ಕುಮಟಳ್ಳಿಗೆ ಟಿಕೆಟ್ ಇಲ್ಲಾಂದ್ರೆ ತನಗೂ ಬೇಡ ಎಂದು ದಾರ್ಷ್ಟ್ಯತೆ ತೋರಿದ ಜಾರಕಿಹೊಳಿ ಅವರನ್ನು ನಿಜವಾದ ಗಂಡಸು ಎಂದು ಬಸನಗೌಡ ಯತ್ನಾಳ್ ಬಣ್ಣಿಸಿದರು.

ಬೆಳಗಾವಿ: ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ (Mahesh Kumatalli) ಪರ ಪ್ರಚಾರ ಮಾಡಲು ಇಂದು ಬಿಜೆಪಿ ನಾಯಕರ ದಂಡೇ ಅಗಮಿಸಿತ್ತು. ಬಿಎಸ್ ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾಗಿದ್ದಾಗ ಅವರ ಬದ್ಧವೈರಿಯಂತಾಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಥಣಿಯಲ್ಲಿ ಮಾಜಿ ಮುಖ್ಯಮಂತ್ರಿಯ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿ ಮಾತಾಡಿದ ಯತ್ನಾಳ್, ಮಹೇಶ್ ಕುಮಟಳ್ಳಿಗೆ ಸೌಮ್ಯ ಸ್ವಭಾವ ತೊರೆದು ರಮೇಶ್ ಜಾರಕಿಹೊಳಿ ಹಾಗೆ ಗಡಸುತನ, ದಿಟ್ಟತನ ಪ್ರದರ್ಶಿಸುವಂತೆ ಸಲಹೆ ನೀಡಿದರು. ಕುಮಟಳ್ಳಿಗೆ ಟಿಕೆಟ್ ಇಲ್ಲಾಂದ್ರೆ ತನಗೂ ಬೇಡ ಎಂದು ದಾರ್ಷ್ಟ್ಯತೆ ತೋರಿದ ಜಾರಕಿಹೊಳಿ ಅವರನ್ನು ನಿಜವಾದ ಗಂಡಸು ಎಂದು ಬಸನಗೌಡ ಯತ್ನಾಳ್ ಬಣ್ಣಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ