ಶಾಸಕಾಂಗ ಪಕ್ಷದ ಸಭೆ ಬಹಿಷ್ಕರಿಸಿ ಹೊರಬಂದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್ ಮತ್ತು ಜಾರಕಿಹೊಳಿ!

ಯಾಕೆ ಬಂದರು, ಒಳಗಡೆ ಏನು ನಡೆಯಿತು ಅಂತ ನಿಖರವಾಗಿ ಗೊತ್ತಾಗಿಲ್ಲ. ಯಾಕೆ ಸರ್ ಆಚೆ ಬಂದಿದ್ದು ಅಂತ ಮಾಧ್ಯಮದವರು ಕೇಳಿದಾಗ ಚಹಾ ಕುಡಿಯುವ ಅಂತ ಬಂದಿದ್ದೀವಿ ಅನ್ನುತ್ತಾರೆ. ಅಲ್ಲಾ ಸಾರ್ ಇಲ್ಲೇ ಹೋಟೆಲ್ ನಲ್ಲಿ ಕುಡಿಯಬಹುದಿತ್ತಲ್ಲ ಅಂದಾಗ, ಇಲ್ಲಿ ಟೀ ಬಹಳ ದುಬಾರಿ ನಮ್ಮಂಥ ಬಡವರು ಅಫೋರ್ಡ್ ಮಾಡಕ್ಕಾಗಲ್ಲ ಅನ್ನುತ್ತಾರೆ.

ಶಾಸಕಾಂಗ ಪಕ್ಷದ ಸಭೆ ಬಹಿಷ್ಕರಿಸಿ ಹೊರಬಂದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್ ಮತ್ತು ಜಾರಕಿಹೊಳಿ!
|

Updated on: Nov 17, 2023 | 7:14 PM

ಬೆಂಗಳೂರು: ಇದನ್ನು ನಿರೀಕ್ಷಿಸಲಾಗುತ್ತೇ? ಇಲ್ಲ ಮಾರಾಯ್ರೇ. ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಕ್ಷರಶಃ ರೆಬೆಲ್ ಆಗಿದ್ದಾರೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಖಾಸಗಿ ಹೋಟೆಲೊಂದರಲ್ಲಿ ಇವತ್ತು ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಬಸನಗೌಡ ಪಾಟೀಲ್ ಯತ್ನಾಳ್ ಸರಿಯಾದ ಸಮಯಕ್ಕೆ ಅಗಮಿಸಿದ್ದೇನೋ ನಿಜ; ಆದರೆ ಅಲ್ಲಿಂದ ಕೂಡಲೇ ವಾಪಸ್ಸು ಕೂಡ ಹೊರಟರು! ಹೌದು, ಸಭೆ ಆರಂಭವಾವಗುವ ಮೊದಲೇ ಅವರು ಹೊರಬಂದರು. ಯಾಕೆ ಬಂದರು, ಒಳಗಡೆ ಏನು ನಡೆಯಿತು ಅಂತ ನಿಖರವಾಗಿ ಗೊತ್ತಾಗಿಲ್ಲ. ಯಾಕೆ ಸರ್ ಆಚೆ ಬಂದಿದ್ದು ಅಂತ ಮಾಧ್ಯಮದವರು ಕೇಳಿದಾಗ ಚಹಾ ಕುಡಿಯುವ ಅಂತ ಬಂದಿದ್ದೀವಿ ಅನ್ನುತ್ತಾರೆ. ಅಲ್ಲಾ ಸಾರ್ ಇಲ್ಲೇ ಹೋಟೆಲ್ ನಲ್ಲಿ ಕುಡಿಯಬಹುದಿತ್ತಲ್ಲ ಅಂದಾಗ, ಇಲ್ಲಿ ಟೀ ಬಹಳ ದುಬಾರಿ (expensive) ನಮ್ಮಂಥ ಬಡವರು ಅಫೋರ್ಡ್ ಮಾಡಕ್ಕಾಗಲ್ಲ ಅನ್ನುತ್ತಾರೆ.

ಇವತ್ತು ದಿನವೆಲ್ಲ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರ ಪರಿಣಾಮವೇ ಇದು? ಯತ್ನಾಳ್ ಅವರೊಂದಿಗೆ ಅರವಿಂದ್ ಬೆಲ್ಲದ್ ಮತ್ತು ರಮೇಶ್ ಜಾರಕಿಹೊಳಿ ಸಹ ಆಚೆ ಬಂದಿರುವುದನ್ನು ನೋಡಬಹುದು. ವಿಜಯೇಂದ್ರ ಆಯ್ಕೆ ಬಗ್ಗೆ ಇದ್ದ ಅಸಮಾಧಾನ ಸ್ಫೋಟಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್