‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬಸವರಾಜ ಬೊಮ್ಮಾಯಿ

|

Updated on: Oct 20, 2024 | 2:57 PM

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದು, ಜೆ.ಪಿ. ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅನೇಕರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಒಡನಾಟವನ್ನು ನೆನೆದರು.

ಬಸವರಾಜ ಬೊಮ್ಮಾಯಿ ಮತ್ತು ಕಿಚ್ಚ ಸುದೀಪ್​ ಅವರ ಕುಟುಂಬದ ನಡುವೆ ಆಪ್ತತೆ ಇದೆ. ಇಂದು (ಅ.20) ಸುದೀಪ್​ ತಾಯಿ ಸರೋಜಾ ಸಂಜೀವ್ ಅವರು ಮೃತರಾಗಿದ್ದು, ಅವರ ಜೊತೆಗಿನ ಒಡನಾಟದ ಬಗ್ಗೆ ಬವಸರಾಜ ಬೊಮ್ಮಾಯಿ ಮಾತನಾಡಿದ್ದಾರೆ. ‘ಸರೋಜಕ್ಕ ನನಗೆ ಅತ್ಯಂತ ಪ್ರೀತಿ, ವಿಶ್ವಾಸ ಇದ್ದಂತಹ ವ್ಯಕ್ತಿ. ಬಂದಾಗೆಲ್ಲ ಅವರು ನಮಗೆ ಊಟ ಹಾಕಿದ್ದರು. ಅವರು ಅನ್ನಪೂರ್ಣೇಶ್ವರಿ. ಕುಟುಂಬಕ್ಕೆ ಅವರು ಆಧಾರಸ್ಥಂಭ ಆಗಿದ್ದರು. ಸುದೀಪ್ ಅವರನ್ನು ತುಂಬ ಪ್ರೀತಿಯಿಂದ ಬೆಳೆಸಿದ್ದರು’ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on