ಬೆಂಗಳೂರಲ್ಲಿ ಮಳೆ ಸೃಷ್ಟಿಸುತ್ತಿರುವ ಅನಾಹುತಗಳ ಮೇಲೆ ಬೆಳಕು ಚೆಲ್ಲಿದ ಖ್ಯಾತ ವಕೀಲ ಜಗದೀಶ್

|

Updated on: Oct 22, 2024 | 12:30 PM

ಕೊಡಿಗೇಹಳ್ಳಿಯ ಕೆರೆಯನ್ನು ಶೇಕಡಾ 40ರಷ್ಟು ಒತ್ತುವರಿ ಮಾಡಿಕೊಳ್ಳಲಾಗಿದೆ, ಪ್ರದೇಶದ ರಾಜಾಕಾಲುವೆಗಳ ಮೇಲೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ, ಕೆಂಪೇಗೌಡ ಅವರ ಕಾಲದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಕೆರೆಗಳು ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ ಎಂದು ಜಗದೀಶ್ ಹೇಳುತ್ತಾರೆ.

ಬೆಂಗಳೂರು: ಬಾಯಿ ಭದ್ರವಿಲ್ಲದ ಕಾರಣ ಬಿಗ್​ಬಾಸ್ ಕನ್ನಡ ಕಾರ್ಯಕ್ರಮದಿಂದ ಹೊರಬಿದ್ದಿರುವ ಬೆಂಗಳೂರಿನ ಖ್ಯಾತ ವಕೀಲ ಕೆಎನ್ ಜಗದೀಶ್ ನಗರದಲ್ಲಿ ಮಳೆ ಸೃಷ್ಟಿಸುತ್ತಿರುವ ಅವಾಂತರಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಪ್ರತಿಷ್ಠಿತ ಏರಿಯಾಗಳೆನಿಸಿರುವ ಭದ್ರಪ್ಪ ಲೇಔಟ್, ಕೊಡಿಗೇಹಳ್ಳಿ ಮತ್ತು ಟಾಟಾ ನಗರಗಳಲ್ಲಿ ಅಕ್ರಮವಾಗಿ ಅಪಾರ್ಟ್​​ಮೆಂಟ್​ ಗಳನ್ನು ಕಟ್ಟಿರುವುದರಿಂದ ಮಳೆನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ ಎಂದು ಜಗದೀಶ್ ಹೇಳುತ್ತಾರೆ. ಈ ಪ್ರದೇಶಗಳಲ್ಲಿನ ಭೂ ಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಕೈಜೋಡಿಸಿರುವರೆಂದು ಖ್ಯಾತ ಲಾಯರ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಗದೀಶ್ ವಿರುದ್ಧ ಬೆಂಗಳೂರು ವಕೀಲರ ಸಂಘ ಗರಂ; ಕಲರ್ಸ್ ವಾಹಿನಿಗೆ ಬರೆದ ಪತ್ರದಲ್ಲಿ ಏನಿದೆ?

Published On - 11:38 am, Tue, 22 October 24

Follow us on