ಸಿಎಂ ಸಿಟಿ ರೌಂಡ್ಸ್; ಸಿದ್ದರಾಮಯ್ಯಗೆ ಹೂಗುಚ್ಛ ಕೊಟ್ಟು ಸೆಲ್ಫಿ ಕೇಳಿದ ಹೆಣ್ಮಕ್ಳು
ಸಿಲಿಕಾನ್ ಸಿಟಿ ಬೆಂಗಳೂರು ರಸ್ತೆ ಗುಂಡಿಗಳ ಕಾರಣದಿಂದಲೇ ಸದ್ದು ಮಾಡುತ್ತಿದೆ. ಹಾಗಾಗಿ ಬೆಂಗಳೂರು ನಗರ ರಸ್ತೆಗಳ ಪರಿಸ್ಥಿತಿ ಅರಿಯಲು ಶನಿವಾರ (ಸೆ. 28) ಸಿದ್ದರಾಮಯ್ಯ ಅವರು ಸಿಟಿ ರೌಂಡ್ಸ್ ನಡೆಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದಿದ್ದಂತ ಮಹಿಳಾ ಫ್ಯಾನ್ಸ್ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ಕೊಟ್ಟು ಸೆಲ್ಫಿ ಕೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 28: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ತೀರಾ ಹದಗೆಟ್ಟಿದ್ದು, ಐಟಿ-ಬಿಟಿ ಸಿಟಿಯಲ್ಲಿ ವಾಹನ ಸವಾರರು ಓಡಾಡೋಕೆ ಕಷ್ಟಪಡುವಂತಾಗಿದೆ. ಈ ಹದಗೆಟ್ಟಿರುವ ಬೆಂಗಳೂರು ನಗರ ರಸ್ತೆಗಳ ಪರಿಸ್ಥಿತಿ ಅರಿಯಲು ಶನಿವಾರ (ಸೆ. 28) ಸಿದ್ದರಾಮಯ್ಯ (Siddaramaiah) ಅವರು ಸಿಟಿ ರೌಂಡ್ಸ್ ನಡೆಸಿದ್ದಾರೆ. ಜೊತೆಗೆ ರಸ್ತೆ ಗುಂಡಿ ಮುಚ್ಚಲು ಡೆಡ್ಲೈನ್ ಕೊಟ್ಟು ಖಡಕ್ ಸೂಚನೆಯನ್ನು ನೀಡಿದ್ದಾರೆ. ಇನ್ನೂ ಈ ವೇಳೆ ಮಹಿಳೆಯರು ಸಿಎಂ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ, ಶೇಕ್ಹ್ಯಾಂಡ್ ಮಾಡಿ ಸೆಲ್ಫಿ ತೆಗೆದು ಖುಷಿ ಪಟ್ಟಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 28, 2025 11:43 AM
Latest Videos

