ಬೆಂಗಳೂರು: ಗರ್ಭಿಣಿ ನಾಯಿ ಮೇಲೆ ವಾಹನ ಹರಿಸಿ ಕ್ರೌರ್ಯ ಮೆರೆದ ಚಾಲಕ; ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Updated By: ಭಾವನಾ ಹೆಗಡೆ

Updated on: Oct 08, 2025 | 1:02 PM

ಬೆಂಗಳೂರಿನಲ್ಲಿ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕಳೆದ ತಿಂಗಳು 20 ನೇ ತಾರೀಕು ನಾಲ್ಕು ವರ್ಷದ ಗರ್ಭಿಣಿ ನಾಯಿಯ ಮೇಲೆ ಉದ್ದೇಶಪುರ್ವಕವಾಗಿ ವಾಹನ ಹರಿಸಿದ್ದು, ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿಯ ಹೊಟ್ಟೆಯಲ್ಲಿ 8 ಮರಿಗಳಿರುವುದು ಪತ್ತೆಯಾಗಿದೆ. ಪ್ರಾಣಿ ಪ್ರಿಯೆ ಶ್ವೇತಾ ಸಿಂಗ್ ರಿಂದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಾಲಕನ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದಾರ.

ಬೆಂಗಳೂರು, ಅಕ್ಟೊಬರ್ 8: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಇಂಡ್ಲಬೆಲೆ ಎನ್.ವಿ.ಟಿ ಮೆಜೆಸ್ಟಿಕ್ ಗಾರ್ಡನ್ ಮುಂಭಾಗದಲ್ಲಿ ರಸ್ತೆ ಬದಿ ಮಲಗಿದ್ದ ಬೀದಿನಾಯಿ ಮೇಲೆ ಟಾಟಾ ಏಸ್ ಹರಿಸಿ ಕ್ರೌರ್ಯ ಮೆರೆದಿದ್ದಾರೆ. ಕಳೆದ ತಿಂಗಳು 20 ನೇ ತಾರೀಖು ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಗರ್ಭಿಣಿ ನಾಯಿ ವಿಲ ವಿಲ ಅಂತ ಒದ್ದಾಡಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿಯ ಹೊಟ್ಟೆಯಲ್ಲಿ 8 ಮರಿಗಳಿರುವುದು ಪತ್ತೆಯಾಗಿದ್ದು, ಪ್ರಾಣಿ ಪ್ರಿಯೆ ಶ್ವೇತಾ ಸಿಂಗ್ ರಿಂದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರು ನೀಡಿದ್ದರೂ ಚಾಲಕನ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 08, 2025 12:58 PM