ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ ಕೆಆರ್​ಎಸ್​ನಿಂದ ಮಾತ್ರ ನೀರು

Edited By:

Updated on: Jun 25, 2026 | 9:01 AM

ಮುಖ್ಯಾಂಶಗಳು

  • ಬೆಂಗಳೂರಿಗರೇ, ನೀರು ಬಳಸುವಾಗ ಇರಲಿ ಎಚ್ಚರ
  • ಖಾಲಿಯಾಗ್ತಿವೆ ಬೆಂಗಳೂರಿಗೆ ನೀರು ಪೂರೈಸುವ ಡ್ಯಾಂಗಳು
  • ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೀವ್ರ ಸಂಕಷ್ಟ

ಮುಂಗಾರು ಕೈಕೊಟ್ಟ ಕಾರಣ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗುತ್ತಿವೆ. ಕಬಿನಿ ಡ್ಯಾಂ ಡೆಡ್ ಸ್ಟೋರೇಜ್ ಹಂತ ತಲುಪಿದ್ದು, ಕೆಆರ್​ಎಸ್​ನಲ್ಲಿ ಕೇವಲ 6 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಬೆಳೆಗಳಿಗೆ ನೀರಾವರಿಗಾಗಿ ಭಾರೀ ಒತ್ತಡ ಎದುರಾಗಿದೆ.

ಮಂಡ್ಯ, ಜೂನ್ 25: ಮುಂಗಾರು ಕೈಕೊಟ್ಟ ಕಾರಣ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕಬಿನಿ ಮತ್ತು ಕೆಆರ್​ಎಸ್​ನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಕಬಿನಿ ಜಲಾಶಯವು ಈಗಾಗಲೇ ಡೆಡ್ ಸ್ಟೋರೇಜ್​ ಹಂತ ತಲುಪಿದೆ. ಸದ್ಯ ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ 81 ಅಡಿಗೆ ತಲುಪಿದ್ದು, ಕೇವಲ 6 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಪ್ರತಿದಿನ 1,800 ಕ್ಯೂಸೆಕ್​ ನೀರನ್ನು ಬಿಡಲಾಗುತ್ತಿದೆ. ಕಬಿನಿಯಿಂದ ನೀರು ಲಭ್ಯವಿಲ್ಲದ ಕಾರಣ ಕೆಆರ್​ಎಸ್​ ಮೇಲೆ ಸಂಪೂರ್ಣ ಒತ್ತಡ ಬಿದ್ದಿದೆ. ಕಬಿನಿಯಲ್ಲಿ ನೀರಿಲ್ಲದ ಕಾರಣ ಇದೀಗ ಬೆಂಗಳೂರಿಗೆ ಭಾಗಶಃ ಕೆಆರ್​ಎಸ್​ನಿಂದಲೇ ನೀರು ಪೂರೈಕೆಯಾಗುತ್ತಿದೆ. ಮುಂದಿನ ಮೂರು ತಿಂಗಳ ಕಾಲ ಇದೇ ನೀರನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈಮಧ್ಯೆ ರೈತರು ಸಹ ತಮ್ಮ ಬೆಳೆಗಳಿಗಾಗಿ ನೀರಿಗಾಗಿ ಆಗ್ರಹಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us