ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಕೋಟ್ಯಾಂತರ ರೂ. ಬೆಲೆ ಬಾಳುವ ಲ್ಯಾಬ್ ಮಷಿನ್ ಹಾಳು
ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ್ದ ಮಾನವನನ ಸ್ಯಾಂಪಲ್ಸ್ ಹಾಳಾಗಿದೆ. ಹೆಚ್ಐವಿ, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ 15 ವರ್ಷಕ್ಕೂ ಹಳೆಯದಾದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಆದರೆ ಎಲ್ಲವೂ ನೀರು ಪಾಲಾಗಿದೆ.
ಬೆಂಗಳೂರು: ಜವಹರಲಾಲ್ ನೆಹರು ಸಂಶೋಧನಾ ಕೇಂದ್ರ ಜಲ ದಿಗ್ಭಂದನ ಹಿನ್ನಲೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಲ್ಯಾಬ್ ಮಷಿನ್ ಹಾಗೂ ಸಂಶೋಧನೆಗಳು ಹಾಳಾಗಿದೆ. ನೆಹರು ಸಂಶೋಧನಾ ಕೇಂದ್ರ ವಿಶ್ವದಲ್ಲೇ ಉನ್ನತ ಸಂಶೋಧನಾ ಕೇಂದ್ರವಾಗಿತ್ತು. ಈ ಸಂಶೋಧನಾ ಕೇಂದ್ರದಲ್ಲಿ ಹತ್ತರಿಂದ ಹದಿನೈದು ವರ್ಷದಿಂದ ಸ್ಯಾಪಂಲ್ಸ್ ಸಂಗ್ರಹಿಸಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಲ್ಯಾಬ್ಗೆ ನೀರು ನುಗ್ಗಿ ಎಲ್ಲವೂ ಹಾಳಾಗಿದೆ. ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ್ದ ಮಾನವನನ ಸ್ಯಾಂಪಲ್ಸ್ ಹಾಳಾಗಿದೆ. ಹೆಚ್ಐವಿ, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ 15 ವರ್ಷಕ್ಕೂ ಹಳೆಯದಾದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಆದರೆ ಎಲ್ಲವೂ ನೀರು ಪಾಲಾಗಿದೆ.
ಪ್ರಮುಖ ಕಾಯಿಲೆಗಳ ಬಗ್ಗೆ ಈ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮಡಲಾಗುತ್ತಿತ್ತು. ಹೀಗಾಗಿ ದೇಶದ ಹಲವು ಭಾಗಗಳಿಂದ ಸ್ಯಾಂಪಲ್ಸ್ ಸಂಗ್ರಿಹಿಸಿಡಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಕ್ಯಾಂಪಸ್ನಲ್ಲಿ ನೀರು ಹಿನ್ನಲೆ, ಕ್ಯಾಂಪಸ್ನಲ್ಲಿ ಪವರ್ ಸಪ್ಲೈ ಕಡಿತ ಮಾಡಲಾಗಿದೆ. ಇದರಿಂದ ಕೆಲವೂ ಲ್ಯಾಬ್ಗಳಿಗೂ ಪವರ್ ಸಪ್ಲೈ ನಿಂತಿದೆ. ಹೀಗಾಗಿ ಪ್ರಮುಖ ಸ್ಯಾಪಂಲ್ಸ್ ಹಾಳಾಗಿದೆ. ಜಕ್ಕೂರು ಕೆರೆಯಿಂದ ನೀರು ಹೊರ ಬಂದಿದ್ದು, ಮೂರು ಅಡಿಯಷ್ಟು ಕ್ಯಾಂಪಸ್ ಆವರಣದಲ್ಲಿ ನೀರು ನಿಂತಿದೆ.
ಇದನ್ನೂ ಓದಿ:
ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು
Bengaluru Rain: ಬೆಂಳೂರಿನಲ್ಲಿ ಮಳೆ ಅವಾಂತರ; ಅಪಾರ್ಟ್ಮೆಂಟ್ಗಳಿಗೆ ನುಗ್ಗಿದ ನೀರು
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

