ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು: ಪ್ರಶಾಂತ್ ಮನ ಮಿಡಿಯುವ ಮಾತು

Updated on: Jun 08, 2025 | 1:15 PM

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಆರ್​ಸಿಬಿ ಅಭಿಮಾನಿಗಳು ಮೃತಪಟ್ಟ ಘಟನೆ ಬಗ್ಗೆ ಗಾಯಾಳು ಪ್ರಶಾಂತ್ ಎಂಬುವವರು ದುರಂತದ ಭೀಕರತೆ ಬಿಚ್ಚಿಟ್ಟಿದ್ದಾರೆ. ಗೇಟ್ ನಂಬರ್ 7 ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಉಂಟಾದ ಈ ದುರಂತದಲ್ಲಿ ಅವರು ತೀವ್ರ ಸಂಕಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ.

ಬೆಂಗಳೂರು, ಜೂನ್​ 08: ಕಾಲ್ತುಳಿತದಿಂದ ಆರ್​ಸಿಬಿಯ (RCB) 11 ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದ ಭೀಕರತೆಯನ್ನು ಗಾಯಾಳು ಪ್ರಶಾಂಶ್​ ಎಂಬುವವರು ಬಿಚ್ಚಿಟ್ಟಿದ್ದಾರೆ. ಸ್ಟೇಡಿಯಂನ ಗೇಟ್ ನಂ.7ರ ಬಳಿ 1 ಲಕ್ಷ ಜನರು ಸೇರಿದ್ದರು. ಕೈಮುಗಿದು ಕೇಳಿಕೊಂಡರು ಸಹ ಸೆಕ್ಯೂರಿಟಿ ಗೇಟ್ ತೆಗೆಯಲಿಲ್ಲ. ನಾನು ರಸ್ತೆಯಲ್ಲೇ ಒಂದು ಗಂಟೆ ಬಿದ್ದು ಒದ್ದಾಡಿದ್ದೆ. ಇದು ಸರ್ಕಾರ ಮಾಡಿದ ಎಡವಟ್ಟು ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us