ಹಾಸನಾಂಬೆಯ ದರ್ಶನಕ್ಕೆ ಪತಿಯೊಂದಿಗೆ ಆಗಮಿಸಿದ ಭವಾನಿ ರೇವಣ್ಣ ಜನರ ಗಮನ ತಮ್ಮತ್ತ ಸೆಳೆದುಕೊಂಡರು!

ಜನ ಅವರನ್ನು ನೋಡಿದಾಕ್ಷಣ ಅಕ್ಕಾ ಅಕ್ಕಾ ಅಂತ ದುಂಬಾಲು ಬೀಳುತ್ತಾರೆ. ದೇವಿಯ ದರ್ಶನಕ್ಕಾಗಿ ಸಾಲಲ್ಲಿ ನಿಂತಿರುವ ಜನ ಸಹ ಭವಾನಿ ಅವರಿಗೆ ಕೈಮುಗಿದು ನಮಸ್ಕರಿಸುವುದನ್ನು ನೋಡಬಹುದು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್ ಗೆಲುವಿಗೆ ಭವಾನಿ ನಡೆಸಿದ ಪ್ರಚಾರ ನಿರ್ಣಾಯಕವಾಗಿತ್ತು ಅಂತ ಕನ್ನಡಿಗರಿಗೆಲ್ಲ ಗೊತ್ತು.

ಹಾಸನಾಂಬೆಯ ದರ್ಶನಕ್ಕೆ ಪತಿಯೊಂದಿಗೆ ಆಗಮಿಸಿದ ಭವಾನಿ ರೇವಣ್ಣ ಜನರ ಗಮನ ತಮ್ಮತ್ತ ಸೆಳೆದುಕೊಂಡರು!
|

Updated on: Nov 10, 2023 | 12:11 PM

ಹಾಸನ: ಹಾಸನ ಜಿಲ್ಲೆಯಲ್ಲಿ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಧರ್ಮಪತ್ನಿ ಭವಾನಿ ರೇವಣ್ಣ (HD Revanna) ಗತ್ತೇ ಹಾಗೆ ಮಾರಾಯ್ರೇ. ಅವರಿದ್ದಲ್ಲಿ ಅಭಿಮಾನಿಗಳು ಮುಕ್ಕುರುತ್ತಾರೆ, ಮಾಧ್ಯಮದವರನ್ನು ಅವರು ತಮ್ಮತ್ತ ಸೆಳೆದುಕೊಂಡು ಬಿಡುತ್ತಾರೆ. ಹಾಗೆ ನೋಡಿದರೆ ಭವಾನಿ ಈಗ ಯಾವುದೇ ಹುದ್ದೆಯಲ್ಲಿಲ್ಲ, ಹಿಂದೆ ಅವರು ಜಿಲ್ಲಾ ಪಂಚಾಯತ್ (Zilla Panchayat) ಸದಸ್ಯರಾಗಿದ್ದರು. ಆದರೆ, ಒಬ್ಬ ಜನಪ್ರಿಯ ಶಾಸಕನಿಗಿಂತ ಹೆಚ್ಚು ಅಭಿಮಾನಿ ಮತ್ತು ಬೆಂಬಲಿಗರು ಅವರಿಗಿದ್ದಾರೆ. ಇವತ್ತು ಅವರು ಪತಿ ರೇವಣ್ಣ ಅವರೊಂದಿಗೆ ಹಾಸನಾಂಬೆ ದರ್ಶನಕ್ಕೆ ಬಂದ ದೃಶ್ಯಗಳನ್ನು ನೋಡಿ. ಜರತಾರಿ ಸಿರೆಯುಟ್ಟು ಕತ್ತಲ್ಲಿ ಕಾಸಿನ ಸರ ತಲೆಗೆ ಕನಕಾಂಬರ ಹೂ ಮುಡಿದು ಜನರ ನಡುವೆ ಅವರು ನಡೆದು ಬರುವ ದೃಶ್ಯ ಆಕರ್ಷಕ ಅಂತ ಬೇರೆ ಹೇಳಬೇಕಿಲ್ಲ. ಅಗಲೇ ಹೇಳಿದ ಹಾಗೆ, ಜನ ಅವರನ್ನು ನೋಡಿದಾಕ್ಷಣ ಅಕ್ಕಾ ಅಕ್ಕಾ ಅಂತ ದುಂಬಾಲು ಬೀಳುತ್ತಾರೆ. ದೇವಿಯ ದರ್ಶನಕ್ಕಾಗಿ ಸಾಲಲ್ಲಿ ನಿಂತಿರುವ ಜನ ಸಹ ಭವಾನಿ ಅವರಿಗೆ ಕೈಮುಗಿದು ನಮಸ್ಕರಿಸುವುದನ್ನು ನೋಡಬಹುದು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್ ಗೆಲುವಿಗೆ ಭವಾನಿ ನಡೆಸಿದ ಪ್ರಚಾರ ನಿರ್ಣಾಯಕವಾಗಿತ್ತು ಅಂತ ಕನ್ನಡಿಗರಿಗೆಲ್ಲ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಕನಕದಾಸ ಜಯಂತಿ: ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಸಚಿವ ಜೋಶಿ
ಕನಕದಾಸ ಜಯಂತಿ: ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಸಚಿವ ಜೋಶಿ
‘ನನ್ನ ವಿಚಾರಕ್ಕೆ ಬರಲೇಬೇಡಮ್ಮ’; ಸಂಗೀತಾ ವಿರುದ್ಧ ಸಿಡಿದೆದ್ದ ತುಕಾಲಿ
‘ನನ್ನ ವಿಚಾರಕ್ಕೆ ಬರಲೇಬೇಡಮ್ಮ’; ಸಂಗೀತಾ ವಿರುದ್ಧ ಸಿಡಿದೆದ್ದ ತುಕಾಲಿ
Bomb Threats to Schools; ಪೋಷಕರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು: ಅಶೋಕ
Bomb Threats to Schools; ಪೋಷಕರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು: ಅಶೋಕ