ಪಕ್ಕದಲ್ಲೇ ಮಾಂಜ್ರಾ ನದಿ ಇದ್ದರೂ ಬೀದರ್ನ ಇಸ್ಲಾಂಪುರ ತಾಂಡಾದಲ್ಲಿ ನೀರಿಗಾಗಿ ತಪ್ಪದ ಪರದಾಟ
ಬೀದರ್ ಜಿಲ್ಲೆಯ ಇಸ್ಲಾಂಪುರ ತಾಂಡಾ ಕಳೆದ ಒಂದು ತಿಂಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಮಾಂಜ್ರಾ ನದಿ ಅರ್ಧ ಕಿ.ಮೀ. ದೂರದಲ್ಲಿದ್ದರೂ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಯೂ ವಿಫಲವಾಗಿದ್ದು, ಬೋರ್ವೆಲ್ ಕೆಟ್ಟಿದ್ದರೂ ಪಿಡಿಓ ರಿಪೇರಿಗೆ ಸ್ಪಂದಿಸಿಲ್ಲ. ಇದರಿಂದ ತಾಂಡಾದ 200ಕ್ಕೂ ಹೆಚ್ಚು ನಿವಾಸಿಗಳು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.
ಬೀದರ್, ಆಗಸ್ಟ್ 28: ಜಿಲ್ಲೆಯ ಇಸ್ಲಾಂಪುರ ತಾಂಡಾ ಕಳೆದ ಒಂದು ತಿಂಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಮಳೆಗಾಲದಲ್ಲೂ ಈ ತಾಂಡಾದ 30 ಮನೆಗಳ 200ಕ್ಕೂ ಹೆಚ್ಚು ನಿವಾಸಿಗಳು, ಬಹುತೇಕ ಕೂಲಿ ಕಾರ್ಮಿಕರು, ನೀರಿಗಾಗಿ ಪ್ರತಿದಿನ ಪರದಾಡುತ್ತಿದ್ದಾರೆ. ಅಚ್ಚರಿಯೆಂದರೆ, ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಮಾಂಜ್ರಾ ನದಿ ಹರಿಯುತ್ತಿದ್ದರೂ, ತಾಂಡಾದಲ್ಲಿ ನೀರಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ನಲ್ಲಿಗಳ ವ್ಯವಸ್ಥೆ ಮಾಡಿದ್ದರೂ, ಬೆರಳೆಣಿಕೆಯ ಮನೆಗಳಿಗೆ ಮಾತ್ರ ನೀರು ಸಿಗುತ್ತದೆ. ಕುಡಿಯುವ ನೀರಿಗಾಗಿ ಕೊರೆಯಲಾದ ಬೋರ್ವೆಲ್ ಕೂಡ ಒಂದು ತಿಂಗಳಿಂದ ಕೆಟ್ಟು ನಿಂತಿದೆ. ಈ ಬಗ್ಗೆ ಪಿಡಿಒಗೆ ಹಲವು ಬಾರಿ ಮನವಿ ಮಾಡಿದರೂ, ಅವರು ಬೋರ್ವೆಲ್ ರಿಪೇರಿ ಮಾಡಲು ಸ್ಪಂದಿಸಿಲ್ಲ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
