ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
Bigg Boss Kannada: ಈ ವಾರ ಬಿಗ್ಬಾಸ್ ಮನೆಯಲ್ಲಿ ಹಲವು ಘಟನೆಗಳು ನಡೆದಿವೆ. ರಜತ್, ಧನರಾಜ್ ಮೇಲೆ ರೌಡಿಸಂ ತೋರಿಸಿದ್ದಾರೆ. ಉಗ್ರಂ ಮಂಜು ಹಾಗೂ ಗೌತಮಿ ದೂರಾಗಿದ್ದಾರೆ. ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ಚೈತ್ರಾ ಜೈಲಿಗೆ ಹೋಗಿರುವುದು ಮಾತ್ರವೇ ಅಲ್ಲದೆ. ಈಗ ಎಲ್ಲ ಕಿವಿ ಹಿಂಡಲು ಬಂದಿದ್ದಾರೆ ಸುದೀಪ್.
ಮತ್ತೊಂದು ಶನಿವಾರ ಬಂದಿದೆ, ಬಿಗ್ಬಾಸ್ ವೇದಿಕೆಗೆ ಮತ್ತೆ ಬಂದಿದ್ದಾರೆ ಕಿಚ್ಚ ಸುದೀಪ್. ಈ ವಾರ ಬಿಗ್ಬಾಸ್ ಮನೆಯಲ್ಲಿ ಹಲವು ಘಟನೆಗಳು ನಡೆದಿವೆ. ರಜತ್, ಧನರಾಜ್ ಮೇಲೆ ರೌಡಿಸಂ ತೋರಿಸಿದ್ದಾರೆ. ಉಗ್ರಂ ಮಂಜು ಹಾಗೂ ಗೌತಮಿ ದೂರಾಗಿದ್ದಾರೆ. ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ಚೈತ್ರಾ ಜೈಲಿಗೆ ಹೋಗಿರುವುದು ಮಾತ್ರವೇ ಅಲ್ಲದೆ. ಜೈಲಿಂದ ತಪ್ಪಿಸಿಕೊಂಡು ನಿಯಮ ಮುರಿದಿದ್ದಾರೆ. ಒಟ್ಟಾರೆ ಈ ವಾರ ಸಾಕಷ್ಟು ಘಟನೆಗಳು ನಡೆದಿವೆ, ಸುದೀಪ್ಗೆ ತಿದ್ದಲು ಸಾಕಷ್ಟು ವಿಷಯಗಳು ಈ ವಾರ ಇವೆ. ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್, ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ದಾರಿ ತೋರಿಸುವ ಕಾರ್ಯ ಮಾಡೋಣ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us