AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್

ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್

ರಾಜೇಶ್ ದುಗ್ಗುಮನೆ
|

Updated on: Sep 12, 2026 | 1:58 PM

Share

ಬಿಗ್ ಬಾಸ್ ಕನ್ನಡ ಮೊದಲ ವಾರ ಪೂರ್ಣಗೊಂಡಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮನೆಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಸ್ಪರ್ಧಿಗಳ ನಡುವಿನ ತಾರತಮ್ಯದ ಕಿಚ್ಚು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಾರಿಯ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ನಡೆಗೆ ಭಾರೀ ಗರಂ ಆಗಿದ್ದು, ಗಗನ್ ಹಾಗೂ ತಾಂಡವ್ ರಾಮ್ ಅವರಿಗೆ ಕಠಿಣವಾಗಿ ಕ್ಲಾಸ್ ತಗೆದುಕೊಳ್ಳುವ ಸೂಚನೆ ಸಿಕ್ಕಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಮೊದಲ ವಾರದ ಪಂಚಾಯ್ತಿ ಬಂದಿದೆ. ಗಗನ್ ಚಿನ್ನಪ್ಪಗೆ ನೀಡಲಾಗಿದ್ದ ವಿಐಪಿ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡಿರುವುದು ಸುದೀಪ್ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

ಮತ್ತೊಂದೆಡೆ ಮನೆಯಲ್ಲಿ ‘ಕಾಮನ್ ಮ್ಯಾನ್’ ಹಾಗೂ ‘ಸೆಲೆಬ್ರಿಟಿ’ ಎಂಬ ಭೇದಭಾವ ಮತ್ತೆ ತಲೆದೂರಿದೆ. ಗಗನ್ ಹಾಗೂ ತಾಂಡವ್ ರಾಮ್ ಅವರ ನಡೆಗಳು ಮನೆಯಲ್ಲಿ ಸಾರಾಸಗಟಾಗಿ ಸಾಮಾನ್ಯ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುವಂತಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ವೇದಿಕೆ ಮೇಲೆಯೇ ಕಿಚ್ಚ ಸುದೀಪ್ ಗಂಭೀರ ಚರ್ಚೆ ನಡೆಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us