AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಮಂಜುನಾಥ ಸಿ.
|

Updated on: Dec 28, 2024 | 4:06 PM

Share

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರ ಮತ್ತೊಂದು ವೀಕೆಂಡ್ ಎಪಿಸೋಡ್​ಗೆ ಸುದೀಪ್ ಆಗಮಿಸಿದ್ದಾರೆ. ಈ ಬಾರಿ ಸುದೀಪ್​ಗೆ ಮಾತನಾಡಲು ಸಾಕಷ್ಟು ವಿಷಯ ಇದೆ. ರೆಸಾರ್ಟ್​ ಟಾಸ್ಕ್​ನಲ್ಲಿ ಹಲವರು ನಿಯಮಗಳನ್ನು ಮುರಿದು ಆಟವಾಡಿದ್ದಾರೆ. ಭವ್ಯಾ ಅಂತೂ ಮೋಸದ ಆಟ ಆಡಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಸುದೀಪ್ ಯಾರ್ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.

ಮತ್ತೊಂದು ಶನಿವಾರ ಬಂದಿದೆ. ಮತ್ತೆ ಸುದೀಪ್ ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ತಪ್ಪು ಮಾಡಿದವರ ಮೇಲೆ ಮಾತಿನ ಚಾಟಿ ಬೀಸಲು ರೆಡಿಯಾಗಿದ್ದಾರೆ. ಈ ವಾರ ಸುದೀಪ್​ ಅವರಿಗೆ ಮಾತನಾಡಲು ಸಾಕಷ್ಟು ಸರಕು ಇದೆ. ರೆಸಾರ್ಟ್ ಟಾಸ್ಕ್​ನಲ್ಲಿ ಹಲವರು ನಿಯಮ ಮೀರಿ ಆಟ ಆಡಿದ್ದಾರೆ. ಅದರಲ್ಲೂ ಮನೆಯ ಕ್ಯಾಪ್ಟನ್ ಆಗಿರುವ ಭವ್ಯಾ, ನಿಯಮ ಮೀರಿ ಆಟವಾಡಿ ಮನೆಯ ಕ್ಯಾಪ್ಟನ್ ಆಗಿರುವುದು ಗಮನಕ್ಕೆ ಬಂದಿದೆ. ಕ್ಯಾಪ್ಟನ್ ಆಗಿ ನಾಮಿನೇಷನ್​ನಿಂದ ಬಚಾವ್ ಸಹ ಆಗಿದ್ದಾರೆ. ಆದರೆ ಇಂದು ಸುದೀಪ್​, ಭವ್ಯಾಗೆ ಸರಿಯಾಗಿ ಬುದ್ಧಿಕಲಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More