ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್ಬಾಸ್ ನೀತು ಮಾತು
Pavithra Gowda: ಪವಿತ್ರಾ ಗೌಡ ಪ್ರಾರಂಭ ಮಾಡಿದ್ದ ಫ್ಯಾಷನ್ ಬುಟೀಕ್ ರೆಡ್ ಕಾರ್ಪೆಟ್ ಅವರು ಜೈಲು ಸೇರಿದ ಬಳಿಕ ಬಂದ್ ಆಗಿತ್ತು. ಇದೀಗ ಮತ್ತೆ ಅದನ್ನು ರೀ ಲಾಂಚ್ ಮಾಡಿದ್ದಾರೆ. ಕಳೆದ ಬಾರಿಯಂತಲ್ಲದೆ ಈ ಬಾರಿ ಕೆಲವು ಗೆಳೆಯರು ಮಾತ್ರವೇ ಕಾರ್ಯಕ್ರಮಕ್ಕೆ ಬಂದಿದ್ದರು. ಅವರಲ್ಲಿ ಬಿಗ್ಬಾಸ್ ನೀತು ಸಹ ಒಬ್ಬರು. ಪವಿತ್ರಾ ಬಗ್ಗೆ ನೀತು ಮಾತುಗಳು ಇಲ್ಲಿವೆ...
ಪವಿತ್ರಾ ಗೌಡ ತಮ್ಮ ಫ್ಯಾಷನ್ ಬುಟೀಕ್, ರೆಡ್ ಕಾರ್ಪೆಟ್ ಅನ್ನು ಇಂದು (ಫೆಬ್ರವರಿ 14) ರೀಲಾಂಚ್ ಮಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಜೈಲು ಸೇರಿದ ಬಳಿಕ ರೆಡ್ ಕಾರ್ಪೆಟ್ ಬಂದ್ ಆಗಿತ್ತು. ಹಾಗಾಗಿ ಈಗ ರೆಡ್ ಕಾರ್ಪೆಟ್ ಅನ್ನು ರೀಲಾಂಚ್ ಮಾಡಲಾಗುತ್ತಿದೆ. ಈ ರೀಲಾಂಚ್ ಕಾರ್ಯಕ್ರಮಕ್ಕೆ ಪವಿತ್ರಾರ ಆಯ್ದ ಗೆಳೆಯರು, ಗೆಳತಿಯರು ಮಾತ್ರವೇ ಬಂದಿದ್ದರು. ಬಿಗ್ಬಾಸ್ ನೀತು ಸಹ ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ಮಾಧ್ಯಮಗಳ ಬಳಿ ಮಾತನಾಡಿದ ನೀತು, ಪವಿತ್ರಾ ಬದುಕಲ್ಲಿ ಸಾಕಷ್ಟು ಏಳು-ಬೀಳುಗಳು ಉಂಟಾಗಿವೆ. ಅವು ಸಹಜ. ಏನೇ ಆದರು ಪವಿತ್ರಾ ಗೌಡ ಗಟ್ಟಿ ವ್ಯಕ್ತಿದವರು, ಅವರಿಗೆ ಗೆಲುವು ಸಿಗಲಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 14, 2025 05:05 PM
Latest Videos