ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಾ ರಾಜಭವನಕ್ಕೆ ತೆರಳಿದ ವಿರೋಧಪಕ್ಷಗಳ ಶಾಸಕರು

|

Updated on: Jul 25, 2024 | 6:34 PM

ರಾಜಭವನಕ್ಕೆ ಹೊರಟ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖಭಾವಗಳನ್ನು ಕೊಂಚ ಗಮನಿಸಿ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒಲ್ಲದ ಮನಸ್ಸಿನಿಂದ ಮೆರವಣಿಗೆಯಲ್ಲಿ ಭಾಗಿಯಾದಂತಿದೆ. ಅಶೋಕ ಜೊತೆ ಅವರು ಕೂಡ ನೇತೃತ್ವ ವಹಿಸಬೇಕಿತ್ತು. ಆದರೆ ಅವರನ್ನು ಬಲವಂತದಿಂದ ಕರೆದುಕೊಂಡು ಬಂದಿರುವ ಹಾಗೆ ಭಾಸವಾಗುತ್ತದೆ.

ಬೆಂಗಳೂರು: ಮುಡಾ ಹಗರಣದ ಮೇಲೆ ಚರ್ಚೆ ನಡೆಯಲು ಅವಕಾಶ ಸಿಗದ ಕಾರಣ ರೊಚ್ಚಿಗೆದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಜಭವವನದ ಕಡೆ ಹೊರಟರು. ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರ ನೇತೃತ್ವದಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ಜಾಥಾ ನಡೆಸಿದರು. ದಲಿತರ ಹಣ ತಿಂದು ತೇಗಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಿಕ್ಕಾರ, ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಸದಸ್ಯರು ಕೂಗಿದರು. ಪ್ರತಿಭಟನಾಕಾರ ಕೈಗಳಲ್ಲಿ ‘ಅತ್ತ ದಲಿತರ ದುಡ್ಡು ಲೂಟಿ ಇತ್ತ ಮುಡಾವೂ ಲೂಟಿ,’ ‘ಮುಡಾ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಸಚಿವ ಭೈರತಿ ಸುರೇಶ್ ಗೆ ಧಿಕ್ಕಾರ’ ಅಂತ ಬರೆದ ಪ್ಲಕಾರ್ಡ್ ಗಳಿದ್ದವು. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ಕಾರ್ಯಕಲಾಪದ ನಂತರ ರಾಜ್ಯಪಾಲರನ್ನು ಭೇಟಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Assembly Session: ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗುತ್ತಿಲ್ಲವೆಂದು ಸದನದಲ್ಲಿ ಬಿಜೆಪಿ ನಾಯಕರ ಆಕ್ರೋಶ

Follow us on