ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಲು ಯಾರಿಗೆ ಬಕೆಟ್ ಹಿಡಿದಿದ್ದರು? ಕೆಎಸ್ ಈಶ್ವರಪ್ಪ
ಕಾಂಗ್ರೆಸ್ ಪಕ್ಷದಲ್ಲಾದರೆ, ತಾನು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಕುರುಬರ ಸಮಾವೇಶ ಮಾಡುತ್ತಾರೆ ಮತ್ತು ಡಿಕೆ ಶಿವಕುಮಾರ್ ಒಕ್ಕಲಿಗರೆಲ್ಲ ತಮ್ಮ ಹಿಂದೆ ಬಂದು ನಿಂತುಕೊಳ್ಳಲಿ ಅನ್ನುತ್ತಾರೆ ಅಂತ ಈಶ್ವರಪ್ಪ ಗೇಲಿ ಮಾಡಿದರು. ಬಿಜೆಪಿ ಯಾವುದೇ ಜಾತಿಯ ನಾಯಕನನ್ನು ಓಲೈಸುವ ಅಥವಾ ಶೋಷಿಸುವ ಗೋಜಿಗೆ ಹೋಗಲ್ಲ ಎಂದು ಅವರು ಹೇಳಿದರು.
ವಿಜಯಪುರ: ಬಿಜೆಪಿ ಯಾವುದೇ ಜಾತಿಯ ನಾಯಕನನ್ನು ಓಲೈಸುವ ಅಥವಾ ಶೋಷಿಸುವ ಗೋಜಿಗೆ ಹೋಗಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು ತಮ್ಮ ಬಲಭಾಗದಲ್ಲಿ ಕೂತಿದ್ದ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಅವರನ್ನು ತೋರಿಸಿ, ರಮೇಶ್ ಅವರನ್ನು ಬಿಜೆಪಿ ಯಾವತ್ತೂ ದಲಿತ ನಾಯಕ ಅಂತ ಟ್ರೀಟ್ ಮಾಡಲ್ಲ, ಬದಲಿಗೆ ಈ ಭಾಗದ ಒಬ್ಬ ಪ್ರಾಮಾಣಿಕ ನಾಯಕ, ರಾಜಕಾರಣಿ ಅಂತ ಪರಿಗಣಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಾದರೆ, ತಾನು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ (Siddaramaiah) ಕುರುಬರ ಸಮಾವೇಶ ಮಾಡುತ್ತಾರೆ ಮತ್ತು ಡಿಕೆ ಶಿವಕುಮಾರ್ (DK Shivakumar) ಒಕ್ಕಲಿಗರೆಲ್ಲ ತಮ್ಮ ಹಿಂದೆ ಬಂದು ನಿಂತುಕೊಳ್ಳಲಿ ಅನ್ನುತ್ತಾರೆ ಅಂತ ಈಶ್ವರಪ್ಪ ಗೇಲಿ ಮಾಡಿದರು. ಪಕ್ಷದಲ್ಲಿ ಸ್ಥಾನಮಾನ ಗಿಟ್ಟಿಸಲು ಬಿಜೆಪಿ ನಾಯಕರು ಬಕೆಟ್ ಹಿಡಿಯುತ್ತಿದ್ದಾರೆ ಅಂತ ಜಗದೀಶ್ ಶೆಟ್ಟರ್ ಹೇಳಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅವರು ಮುಖ್ಯಮಂತ್ರಿಯಾಗಲು ಯಾರು ಯಾರಿಗೆ ಬಕೆಟ್ ಹಿಡಿದಿದ್ದರಂತೆ ಅಂತ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್ನಲ್ಲೇ ಹೇರ್ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್

