ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಿ ಎಸ್ ವೈ ಮತ್ತು ಬೊಮ್ಮಾಯಿ ಜೊತೆಯಾಗಿ ಭಾಗಿಯಾದರು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Sep 24, 2022 | 2:44 PM

ಗಣ್ಯರನ್ನು ಹೊತ್ತ ಹೆಲಿಕಾಪ್ಟರ್ ಸಿರೆಗೆರೆಯಲ್ಲಿ ಭೂಸ್ಪರ್ಶ ಮಾಡಿದಾಗ ಅಲ್ಲಿ ನೆರೆದಿದ್ದ ಜನ ಇಬ್ಬರ ಹೆಸರಲ್ಲೂ ಜಯಕಾರ ಮಾಡಿದರು.

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶನಿವಾರ ಹೆಲಿಕಾಪ್ಟರ್ ಒಂದರಲ್ಲಿ ಜೊತೆಯಾಗಿ ಚಿತ್ರದುರ್ಗದ ಸಿರಿಗೆರೆ ತರಳಬಾಳು ಮಥದಲ್ಲಿ ಆಯೋಜಿಸಲಾಗಿದ್ದ ಲಿಂಗೈಕ್ಯ ಶಿವಕುಮಾರ ಶ್ರೀಗಳ (Sri Shivakumar Swamiji) ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಗಣ್ಯರನ್ನು ಹೊತ್ತ ಹೆಲಿಕಾಪ್ಟರ್ ಸಿರೆಗೆರೆಯಲ್ಲಿ ಭೂಸ್ಪರ್ಶ ಮಾಡಿದಾಗ ಅಲ್ಲಿ ನೆರೆದಿದ್ದ ಜನ ಇಬ್ಬರ ಹೆಸರಲ್ಲೂ ಜಯಕಾರ ಮಾಡಿದರು.

Follow Us
Web contact

TV9 Kannada

Read More