ಒಬ್ಬ ಶಾಂತಿಪ್ರಿಯ ಮುಖ್ಯಮಂತ್ರಿ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತುತ್ತಾರೆಯೇ? ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Apr 29, 2025 | 4:50 PM

ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರದ ಮೂಟೆ, ಪ್ರಾಯಶಃ ಮುಂದಿನ ನಾಲ್ಕೈದು ತಿಂಗಳ ಅವಧಿಯಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾದ ಹತಾಷೆ ಅವರನ್ನು ಕಾಡುತ್ತಿರಬಹುದು, ಅವರ ಹೇಳಿಕೆಗೆ ಪಕ್ಕದಲ್ಲೇ ಕುಳಿತಿದ್ದ ಉಪ ಮುಖ್ಯಮಂತ್ರಿಯವರೇ ಬೆಂಬಲ ನೀಡಿಲ್ಲ, ಅವರ ಹೇಳಿಕೆಗೆ ಅವರೇ ಹೊಣೆಗಾರರು ಎಂದು ಶಿವಕುಮಾರ್ ಯಾಕೆ ಹೇಳಿದ್ದಾರೆ ಅಂತ ಸಿದ್ದರಾಮಯ್ಯ ವಿವರಣೆ ನೀಡುತ್ತಾರೆಯೇ ಎಂದು ಆಶೋಕ ಪ್ರಶ್ನಿಸಿದರು.

ಬೆಂಗಳೂರು, ಏಪ್ರಿಲ್ 29: ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತನಗೆ ಯುದ್ಧ ಬೇಕಿಲ್ಲ, ತಾನು ಶಾಂತಿಪ್ರಿಯ ಅಂತ ಹೇಳುತ್ತಾರೆ, ಮತ್ತೊಂದೆಡೆ ಒಬ್ಬ ಪೊಲೀಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ವಾಚಾಮಗೋಚರ ಬೈದು ಕಪಾಳಕ್ಕೆ ಹೊಡೆಯಲು ಮುಂದಾಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಗೇಲಿ ಮಾಡಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅಶೋಕ ಸಿದ್ದರಾಮಯ್ಯರಿಂದ ಬೈಸಿಕೊಂಡ ಅಧಿಕಾರಿ ಐಪಿಎಸ್ ಮಾಡಿ ಸೇವೆಗೆ ಬಂದಿರುತ್ತಾನೆ, ಅವನೇನು ಮುಖ್ಯಮಂತ್ರಿ ಮನೆ ಆಳಲ್ಲ. ಸರ್ಕಾರೀ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳು ಅಯೋಜಿಸುತ್ತಾರೆ, ಒಮ್ಮೆ ಜಿಲ್ಲಾಧಿಕಾರಿಯನ್ನೇ ವೇದಿಕೆ ಮೇಲಿಂದ ಕೆಳಗಿಳಿಸಿದ ಕುಖ್ಯಾತಿ ಸಿದ್ದರಾಮಯ್ಯನವರದ್ದು ಎಂದು ಅಶೋಕ ಹೇಳಿದರು.

ಇದನ್ನೂ ಓದಿ:   ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಜಗದೀಶ್ ಶೆಟ್ಟರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us