ಕಾವೇರಿ ನೀರಿಗಾಗಿ ಮುಂದುವರಿದ ಪ್ರತಿಭಟನೆ; ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಧರಣಿ

ಕಾವೇರಿ ನೀರಿಗಾಗಿ ಪ್ರತಿಭಟನೆ ಮುಂದುವರೆದಿದ್ದು, ಮಂಡ್ಯ(Mandya)ದ ಸಂಜಯ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ(Bengaluru-Mysuru highway)ತಡೆದು ಧರಣಿ ನಡೆಸಿದ್ದಾರೆ. ಹೌದು, ನಿರಂತರವಾಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟ ನಡೆಸುತ್ತಿದೆ.

ಮಂಡ್ಯ, ನ.10: ಕಾವೇರಿ ನೀರಿಗಾಗಿ ಪ್ರತಿಭಟನೆ ಮುಂದುವರೆದಿದ್ದು, ಮಂಡ್ಯ(Mandya)ದ ಸಂಜಯ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ(Bengaluru-Mysuru highway)ತಡೆದು ಧರಣಿ ನಡೆಸಿದ್ದಾರೆ. ಹೌದು, ನಿರಂತರವಾಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟ ನಡೆಸುತ್ತಿದೆ. ಇನ್ನು ಕಾವೇರಿ ಹೋರಾಟಕ್ಕೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ಜಾನಪದ ಪೂಜಾ ಕುಣಿತ ತಂಡ ಕೂಡ ಬೆಂಬಲ ನೀಡಿದ್ದಾರೆ. ತಮಟೆ ಸದ್ದು, ಕಹಳೆ ಹಾಗೂ ಪೂಜಾ ಕುಣಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us