ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜೊತೆ ನರಕವಾಸಿಗಳ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ

|

Updated on: Oct 04, 2024 | 6:39 PM

ಬಿಗ್ ಬಾಸ್​ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತಿದೆ. ಸ್ವರ್ಗವಾಸಿಗಳ ಜೊತೆ ನರಕವಾಸಿಗಳು ಜಗಳಕ್ಕೆ ನಿಂತಿದ್ದಾರೆ. ಕೀ ಇಟ್ಟುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಜಗಳ ಆಗುವ ಮುನ್ಸೂಚನೆ ಕಾಣಿಸಿದೆ. ಚೈತ್ರಾ ಕುಂದಾಪುರ, ಶಿಶಿರ್​, ಮಾನಸಾ, ಮೋಕ್ಷಿತಾ ಪೈ, ಅನುಷಾ ರೈ, ಗೋಲ್ಡ್​ ಸುರೇಶ್​, ರಂಜಿತ್​ ಅವರು ನರಕದಲ್ಲಿ ಇದ್ದಾರೆ.

ಮಾತಿಗೆ ನಿಂತರೆ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ತಿರುಗೇಟು ನೀಡುತ್ತಾರೆ. ನರಕದಲ್ಲಿ ಇರುವ ಅವರು ಹತ್ತಾರು ತಂತ್ರಗಾರಿಕೆ ಮಾಡುತ್ತಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಮೊದಲ ವಾರದಲ್ಲಿ ಸಾಕಷ್ಟು ಕಿರಿಕ್​ಗಳು ನಡೆದಿವೆ. ‘ನರಕದವರು ಕೀ ಕಿತ್ತುಕೊಂಡರೆ ನೀರು ಕೂಡ ಕೊಡಲ್ಲ. ಸ್ಟೋರ್​ ರೂಮ್​ನಿಂದ ಊಟವನ್ನೂ ಕೊಡಲ್ಲ’ ಎಂದು ಉಗ್ರಂ ಮಂಜು ಸವಾಲು ಹಾಕಿದ್ದಾರೆ. ಇದರಿಂದ ದೊಡ್ಡ ಜಗಳ ಆದರೂ ಅಚ್ಚರಿ ಏನಿಲ್ಲ. ಸ್ವರ್ಗದಲ್ಲಿ 10 ಜನ, ನರಕದಲ್ಲಿ 7 ಜನ ಇದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಶೋ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on