125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ: ಸೀಮೆ ಹಸು ಸೇರಿ ಭರ್ಜರಿ ಗಿಫ್ಟ್‌

Edited By:

Updated on: Aug 26, 2026 | 5:24 PM

ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಗಡಿದಂ ಕ್ಷೇತ್ರದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನೇತೃತ್ವದಲ್ಲಿ 125 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ನವದಂಪತಿಗಳಿಗೆ ಚಿನ್ನದ ತಾಳಿ, ಕಾಲುಂಗುರ, 50 ಸಾವಿರ ರೂಪಾಯಿ ಹಣ, ರೇಷ್ಮೆ ಬಟ್ಟೆ ಹಾಗೂ ಜೀವನೋಪಾಯಕ್ಕಾಗಿ ಸೀಮೆ ಹಸು ಉಡುಗೊರೆಯಾಗಿ ನೀಡಲಾಯಿತು.

ಚಿಕ್ಕಬಳ್ಳಾಪುರ, ಆಗಸ್ಟ್​ 26: ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯೋಜಿಸಿದ ಬೃಹತ್ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 125 ಜೋಡಿಗಳು ಸಪ್ತಪದಿ ತುಳಿದರು. ನವದಂಪತಿಗೆ ಬಂಪರ್ ಉಡುಗೊರೆಗಳ ಮಹಾಪೂರವೇ ಸಿಕ್ಕಿದೆ. ವಧುವಿಗೆ ಚಿನ್ನದ ತಾಳಿ, ಕಾಲುಂಗುರ, ವಧು-ವರರು ಮತ್ತು ಅವರ ಪೋಷಕರಿಗೆ ರೇಷ್ಮೆ ವಸ್ತ್ರಗಳನ್ನು ನೀಡಿ ರಾಜವೈಭವದ ಮಾದರಿಯಲ್ಲೇ ಮದುವೆ ನೆರವೇರಿದ್ದು, ಜೊತೆಗೆ ಹನಿಮೂನ್‌ಗೆ ತೆರಳಲು 50 ಸಾವಿರ ರೂ ಹಾಗೂ ಸಂಸಾರದ ಸುಖಮಯ ಜೀವನಕ್ಕೆ ಆಸರೆಯಾಗಲು ಒಂದು ‘ಸೀಮೆ ಹಸು’ವನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಬಡ ಕುಟುಂಬಗಳ ಹೆಣ್ಣುಮಕ್ಕಳ ಬಾಳಿಗೆ ನೆರವಾಗುವ ಈ ಎಲ್ಲಾ ಆಕರ್ಷಕ ಉಡುಗೊರೆಗಳನ್ನು ಪಡೆಯಲು ವಿವಾಹವನ್ನು ಕಡ್ಡಾಯವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದ್ದು, ಶಾಸಕರ ಈ ಜನಪರ ಕಾಳಜಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us