ರಸ್ತೆ ಅಪಘಾತ: ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಮಾಲ್ತೇಶ್ನ ಅಮ್ಮ ಕಮೇಡಿಯನ್ ಚಂದ್ರಪ್ರಭಾನನ್ನು ಶಪಿಸಿದರು!
ಚಂದ್ರಪ್ರಭಾ ಚಿಕ್ಕಮಗಳೂರಿನ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುವ ಮಾಲ್ತೇಶ್ ಹೆಸರಿನ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಗುದ್ದಿದ್ದಾರೆ. ಮಾಲ್ತೇಶ್ ಗಂಭೀಬೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರೂ, ಕಾಮಿಡಿ ನಟ ಅದನ್ನು ಕಾಮಿಡಿ ಅಂದುಕೊಂಡು ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು: ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಎಗ ಹೋರಾಡುತ್ತಿರುವ ಯುವಕನೊಬ್ಬನ ತಾಯಿ ಇವರು. ಅವರನ್ನು ದುಃಖದ ಕೂಪಕ್ಕೆ ದೂಡಿರೋದು ಕನ್ನಡದ ಕಾಮಿಡಿ ನಟ ಜಿ ಚಂದ್ರಪ್ರಭಾ (G Chandraprabha). ಈ ಮನುಷ್ಯ ಬದುಕನ್ನೂ ಕಾಮಿಡಿ (comedy) ಅಂದುಕೊಂಡಂತಿದೆ. ಬದುಕು ಕಾಮಡಿ ಅಲ್ಲ ಮಾರಾಯ. ಸೋಮವಾರ ರಾತ್ರಿ ಸಕಲೇಶಪುರದಿಂದ (Sakleshpur) ಶೂಟಿಂಗ್ ಮುಗಿಸಿಕೊಂಡು ಕಾರಲ್ಲಿ ಹೋಗುತ್ತಿದ್ದ ಚಂದ್ರಪ್ರಭಾ ಚಿಕ್ಕಮಗಳೂರಿನ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುವ ಮಾಲ್ತೇಶ್ ಹೆಸರಿನ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಗುದ್ದಿದ್ದಾರೆ. ಮಾಲ್ತೇಶ್ ಗಂಭೀಬೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರೂ, ಕಾಮಿಡಿ ನಟ ಅದನ್ನು ಕಾಮಿಡಿ ಅಂದುಕೊಂಡು ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ದುಡಿಯುವ ಮಗ ಆಸ್ಪತ್ರೆ ಸೇರಿದ್ದರಿಂದ ಮಾಲ್ತೇಶ್ ಕಂಗಾಲಾಗಿದ್ದಾರೆ ಮತ್ತು ಕಮೇಡಿಯನ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಚಂದ್ರಪ್ರಭಾನಿಗೆ ಕಿಂಚಿತ್ತಾದರೂ ಮಾಮವೀಯತೆ ಇದ್ದರೆ ಕೂಡಲೇ ಆಸ್ಪತ್ರೆಗೆ ತೆರಳಿ ಮಾಲ್ತೇಶ್ ಕುಟುಂಬಕ್ಕೆ ಸಹಾಯ ಮಾಡಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

