ಡಿಕೆಶಿ ಜನಸ್ಪಂದನ ಕಾರ್ಯಕ್ರಮದಲ್ಲಿ ಗಣಪತಿಗೆ ಹಣ ಕೇಳಿದ ಮಕ್ಕಳು, ಡಿಸಿಎಂ ಏನಂದ್ರ ನೋಡಿ

Updated on: Sep 01, 2024 | 4:50 PM

ಗಣೇಶ ಚತುರ್ಥಿಯು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಗಣೇಶ ಚತುರ್ಥಿ (Ganesh Festival) ಬಂತೆಂದರೆ ಸಾಕು ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ತಮ್ಮ ಊರು ಮನೆಗಳಲ್ಲಿ ಗಣೇಶನನ್ನು ಕೂರಿಸುತ್ತಾರೆ. ಅದರಂತೆ ಕನಕಪುರದಲ್ಲಿಂದು ಮಕ್ಕಳು ಗಣೇಶ ಕೂರಿಸಲು ಡಿಕೆ ಶಿವಕುಮಾರ್ ಹತ್ತಿರ ಹಣ ಕೇಳಿರುವ ಪ್ರಸಂಗ ನಡೆಯಿತು.

ರಾಮನಗರ, (ಸೆಪ್ಟೆಂಬರ್ 01): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಕ್ಷೇತ್ರ ಕನಕಪುರದಲ್ಲಿಂದು ಜನಸ್ಪಂದನ ಕಾರ್ಯಕ್ರಮ ನಡೆಸಿದರು. ಈ ವೇಳೆ ಮಕ್ಕಳು ಬಂದು ಡಿಕೆ ಶಿವಕುಮಾರ್ ಅವರಿಗೆ ಗಣಪತಿ ಕೂರಿಸಲು ಹಣ ಕೇಳಿದರು. ಹೌದು..ಗಣಪತಿ ಕೂರಿಸಲು ಸಂಘ ಸಂಸ್ಥೆಗಳು ಸಾರ್ವಜನಿಕರ ಹತ್ತಿರ ಫಂಡ್ ಕಲೆಕ್ಟ್ ಮಾಡುತ್ತವೆ. ಅದರಂತೆ ಅದರಂತೆ ಕನಕಪುರದಲ್ಲಿಂದು ಮಕ್ಕಳು ಗಣೇಶ ಕೂರಿಸಲು ಡಿಕೆ ಶಿವಕುಮಾರ್ ಹತ್ತಿರ ಹಣ ಕೇಳಿರುವ ಪ್ರಸಂಗ ನಡೆಯಿತು. ಈ ವೇಳೆ ಡಿಕೆ ಶಿವಕುಮಾರ್, ಎಂಪಿ ಬರುತ್ತಾರೆ ಹಣ ಕೊಡುತ್ತಾರೆ ನಡೆಯಿರಿ ನಡೆಯಿರಿ ನಡೆಯಿರಿ ಎಂದರು.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More