AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ದೇವೇಗೌಡರು ಪಯಣಿಸುತ್ತಿದ್ದ ಹೆಲಿಕಾಪ್ಟರ್​ಗೂ ಎದುರಾಯ್ತು ತೊಂದರೆ, ಹಾಸನದ ಸಕಲೇಶಪುರದಲ್ಲಿ ಘಟನೆ

Karnataka Assembly Polls: ದೇವೇಗೌಡರು ಪಯಣಿಸುತ್ತಿದ್ದ ಹೆಲಿಕಾಪ್ಟರ್​ಗೂ ಎದುರಾಯ್ತು ತೊಂದರೆ, ಹಾಸನದ ಸಕಲೇಶಪುರದಲ್ಲಿ ಘಟನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 04, 2023 | 6:10 PM

ರಾಜಕಾರಣಿಗಳು ಪಯಣಿಸುವ ಹೆಲಿಕಾಪ್ಟರ್​ಗಳಿಗೆ ಸಮಸ್ಯೆ ಎದುರಾಗುತ್ತಿರುವುದು ಬೆಂಬಲಿಗರಲ್ಲಿ ಆತಂಕ ಮೂಡಿಸುತ್ತಿದೆ

ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು (HD Devegowda) ತೆರಳುತ್ತಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ಸಮಸ್ಯೆ (technical snag)ತಲೆದೋರಿದ್ದರಿಂದ ಅದನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಪೈಲಟ್ ದೋಷ ಸರಿಪಡಿಸಿದ ಬಳಿಕ ಅದು ತನ್ನ ಗಮ್ಯದತ್ತ ತೆರಳಿತು. ಜಿಲ್ಲೆಯ ಸಕಲೇಶಪುರದ (Sakleshpura) ತಾಲ್ಲೂಕು ಕ್ರೀಡಾಂಗಣದಲ್ಲಿ ಘಟನೆ ನಡೆಯಿತು. ಸಕಲೇಶಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿ ಪರ ಸಿ.ಎಂ.ಇಬ್ರಾಹಿಂ ಜೊತೆ ಮತಯಾಚಿಸಿದ ದೇವೇಗೌಡರು ಅರಕಲಗೂಡು ಕಡೆ ತೆರಳುತ್ತಿದ್ದಾಗ ಘಟನೆ ಸಂಭವಿಸಿತು. ರಾಜಕಾರಣಿಗಳು ಪಯಣಿಸುವ ಹೆಲಿಕಾಪ್ಟರ್​ಗಳಿಗೆ ಸಮಸ್ಯೆ ಎದುರಾಗುತ್ತಿರುವುದು ಬೆಂಬಲಿಗರಲ್ಲಿ ಆತಂಕ ಮೂಡಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ