AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮರನಾಥ ಗುಹೆ ಬಳಿ ಮೇಘಸ್ಫೋಟ: ರಕ್ಷಣಾ ಕಾರ್ಯಾಚರಣೆಗೆ MEILನ ನೆರವು ಕೇಳಿದ ಸೇನೆ

ಅಮರನಾಥ ಗುಹೆ ಬಳಿ ಮೇಘಸ್ಫೋಟ: ರಕ್ಷಣಾ ಕಾರ್ಯಾಚರಣೆಗೆ MEILನ ನೆರವು ಕೇಳಿದ ಸೇನೆ

TV9 Web
| Edited By: Rakesh Nayak Manchi|

Updated on:Jul 10, 2022 | 12:33 PM

Share

ಅಮರನಾಥ ಗುಹೆ ಬಳಿ ಮೇಘಸ್ಫೋಟ ಘಟನೆ ಸಂಬಂಧ ಮಣ್ಣಿನಡಿ ಸಿಲುಕಿದ ಯಾತ್ರಿಕರನ್ನ ಹೊರತೆಗೆಯಲು ಸೇನೆಯು ಮೆಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL)ನ ಸಹಾಯ ಕೋರಿದೆ.

ಜಮ್ಮು ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘಸ್ಫೋಟ (Cloudburst near Amarnath Cave) ಘಟನೆ ಸಂಬಂಧ ಮಣ್ಣಿನಡಿ ಸಿಲುಕಿದ ಯಾತ್ರಿಕರನ್ನ ಹೊರತೆಗೆಯಲು ಹರಸಾಹಸ ನಡೆಸಲಾಗುತ್ತಿದೆ. ಇತ್ತ ರಕ್ಷಣಾ ಕಾರ್ಯಾಚರಣೆಗೆ ಸೇನೆಯು ಮೆಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL)ನ ಸಹಾಯ ಕೋರಿದೆ. ಮಣ್ಣು ಅಗೆಯುವ ಮಿನಿ ಎಕ್ಸಾವೇಟರ್ ಯಂತ್ರ ರವಾನಿಸುವಂತೆ MEILಗೆ ಮನವಿ ಮಾಡಿದ್ದು, ಮಿನಿ ಎಕ್ಸಾವೇಟರ್ ಬಿಡಿ ಭಾಗಗಳನ್ನು ಸೇನಾ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಸ್ಥಳಕ್ಕೆ ಕಳುಹಿಸಿಕೊಡಲಿದೆ. ಹೈದರಾಬಾದ್‌ ಮೂಲದ MEIL ಸಂಸ್ಥೆ ಸದ್ಯ ಜೋಝಿಲಾ ಟನಲ್ ಕಾಮಗಾರಿಯನ್ನು ನಡೆಸುತ್ತಿದೆ.

ಇದನ್ನೂ ಓದಿ: ಅಮರನಾಥನಲ್ಲಿ ನಡೆದ ಮೇಘಸ್ಫೋಟದಿಂದ ಬದುಕುಳಿದ ಬಂದ ಕನ್ನಡಿಗರು ತಮ್ಮ ಭಯಾನಕ ಅನುಭವವನ್ನು ಹೇಳಿಕೊಳ್ಳುತ್ತಿದ್ದಾರೆ!

Published on: Jul 10, 2022 12:33 PM
Follow Us
Web contact
Web contact

TV9 Kannada

Read More