ಸಿಎಂ ಮತ್ತು ಡಿಸಿಎಂರಿಂದ ಇವತ್ತು ಕಾವೇರಿಗೆ ಬಾಗಿನ ಸಮರ್ಪಣೆ, ಮಹತ್ವ ವಿವರಿಸಿದ ವೈದಿಕ ಭಾನು ಪ್ರಕಾಶ್ ಶರ್ಮ

ಅರುಣ್​ ಕುಮಾರ್​ ಬೆಳ್ಳಿ

Updated on: Jun 30, 2025 | 11:41 AM

ಭಾಗಮಂಡಲದಿಂದ ಪಶ್ಚಿಮ ಬಂಗಾಳದ ಪೂಂಪುಹಾರ್​ ವರೆಗೆ 835 ಕೀಮೀ ಹರಿಯುವ ಕಾವೇರಿ ನದಿ ಮತ್ತು ಎಲ್ಲ ಹಳ್ಳಕೊಳ್ಳಗಳು ತುಂಬೋದು ಆಷಾಢ ಮಾಸದಲ್ಲೇ ಎಂದು ವೈದಿಕ ಭಾನುಪ್ರಕಾಶ್ ಹೇಳುತ್ತಾರೆ. ಆಷಾಢಮಾಸದ ಮಹತ್ವ ಮತ್ತು ಆಚರಣೆಗಳು ದೇವದೇವತೆಯರಿಗಲ್ಲ, ಮನುಕುಲಕ್ಕೆ ಮಾತ್ರ ಅವು ಮೀಸಲು ಎಂದು ಅವರು ಹೇಳುತ್ತಾರೆ.

ಮಂಡ್ಯ, ಜೂನ್ 30: ವೈದಿಕ ಭಾನುಪ್ರಕಾಶ್ ಶರ್ಮ (Bhanu Prakash Sharma) ಹೇಳುವಂತೆ ಕನ್ನಂಬಾಡಿ ಆಣೆಕಟ್ಟು ನಿರ್ಮಾಣಗೊಂಡ ನಂತರದ 90 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಬ್ರಹ್ಮಗಿರಿಯ ಭಾಗಮಂಡಲದಲ್ಲಿ ಉದ್ಭವಾಗುವ ಕಾವೇರಿ ನದಿ ತುಂಬಿ ಹರಿಯುತ್ತಿದ್ದಾಳೆ ಮತ್ತು ಕೆಆರ್​ಎಸ್ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಈ ಭಾಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ಮತ್ತು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಇಂದು ಕಾವೇರಿಗೆ ಬಾಗಿನ ಅರ್ಪಿಸಲಿದ್ದು, ಅದಕ್ಕಾಗಿ 40 ಜೊತೆ ಬಾಗಿನ ರೆಡಿಯಾಗಿವೆ ಎಂದು ವೈದಿಕ ಹೇಳುತ್ತಾರೆ. ಈ ಸಂದರ್ಭಕ್ಕಾಗಿ ವಿಶೇಷ ಪೂಜೆ ಹೋಮ, ಹವನಗಳನ್ನು ನಡೆಸಲಾಗುತ್ತದೆ ಎಂದು ವೈದಿಕ ಹೇಳುತ್ತಾರೆ.

ಇದನ್ನೂ ಓದಿ:  ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.