ಮುಖ್ಯಮಂತ್ರಿ ಕೈ ಮಾಡಲು ಮುಂದಾಗಿರಲಿಲ್ಲ, ಅಧಿಕಾರಿಗೆ ಕೈ ತೋರಿಸಿ ಏನು ಭದ್ರತೆ ಅಂತಷ್ಟೇ ಪ್ರಶ್ನಿಸಿದ್ದು: ಶಿವರಾಜ್ ತಂಗಡಿಗಿ
ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಮಾಡಿದ್ದು ಸರಿ ಅನ್ನೋದಾದರೆ ನಮ್ಮ ಕಾರ್ಯಕರ್ತರಿಗೂ ಬಿಜೆಪಿ ಸಭೆಗಳಿಗೆ ಹೋಗಿ ಹಾಗೆ ಮಾಡಿ ಎಂದು ಹೇಳುತ್ತೇವೆ ಎಂದು ಸಚಿವ ತಂಗಡಿಗೆ ಹೇಳಿದರು. ಮುಖ್ಯಮಂತ್ರಿಯವರಿಗೆ ಅಪಾರವಾದ ತಾಳ್ಮೆ ಇದೆ, ಆ ಕಾರಣದಿಂದಲೇ ರಾಜ್ಯದ ಬಡ ಜನತೆಗೆ ಸಾಮಾಜಿಕಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಹೇಳಿದರು.
ಬಾಗಲಕೋಟೆ, ಏಪ್ರಿಲ್ 29: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗಿ ಅವರು ನಿನ್ನೆ ಬೆಳಗಾವಿ ಕಾಂಗ್ರೆಸ್ ಸಭೆಯಲ್ಲಿ ನಡೆದ ಘಟನೆಯನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡರು. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಮಾಡಿದ್ದು ಸರಿಯಲ್ಲ, ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಭಾಷಣ ಮಾಡುವಾಗ ಕಪ್ಪು ಬಾವುಟ ಪ್ರದರ್ಶಿಸಿದ್ದು ತಪ್ಪು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನರು ತಾಳ್ಮೆ ಕಳೆದುಕೊಳ್ಳುವ ವ್ಯಕ್ತಿ ಅಲ್ಲ, ಅವರು ಹೆಚ್ಚುವರಿ ಎಸ್ಪಿ ಅವರ ಮೇಲೆ ಕೈ ಮಾಡಲು ಮುಂದಾಗಿರಲಿಲ್ಲ, ತಾನು ವೇದಿಕೆಯ ಮೇಲಿದ್ದೆ ಮತ್ತು ಎಲ್ಲವನ್ನೂ ಕಣ್ಣಾರೆ ಕಂಡಿದ್ದಾಗಿ ಹೇಳುವ ತಂಗಡಿಗಿ, ಮುಖ್ಯಮಂತ್ರಿಯವರು ಯಾಕೆ ಭದ್ರತೆಯಲ್ಲಿ ಲೋಪ ಅಂತ ಕೈ ತೋರಿಸಿ ಅಧಿಕಾರಿಯನ್ನು ಪ್ರಶ್ನಿಸಿದರೇ ಹೊರತು ಕೈ ಮಾಡಲು ಹೋಗಿಲ್ಲ ಎಂದರು.
ಇದನ್ನೂ ಓದಿ: ಭಾಷಣ ವೇಳೆ ಸಿದ್ದರಾಮಯ್ಯಗೆ ಕಪ್ಪು ಬಟ್ಟೆ ಪ್ರದರ್ಶನ: ಪೊಲೀಸ್ ಅಧಿಕಾರಿಯನ್ನು ವೇದಿಕೆ ಮೇಲೆ ಕರೆದು ಸಿಎಂ ತರಾಟೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುಜರಾತ್ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ

‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್

ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
